ADVERTISEMENT

ಅಪ್ರಾಪ್ತೆ ಪರಾರಿ: ಕುಟುಂಬಸ್ಥರ ದಾಂದಲೆ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2021, 4:52 IST
Last Updated 26 ಅಕ್ಟೋಬರ್ 2021, 4:52 IST
ಕುಣಿಗಲ್ ತಾಲ್ಲೂಕು ಭೈರನಾಯಕನಹಳ್ಳಿಯಲ್ಲಿ ಅಪ್ರಾಪ್ತೆಯ ಕಡೆಯವರಿಂದ ಪ್ರಿಯಕರನ ಮನೆಯ ಪೀಠೋಪಕರಣ ದ್ವಂಸವಾಗಿರುವುದು.
ಕುಣಿಗಲ್ ತಾಲ್ಲೂಕು ಭೈರನಾಯಕನಹಳ್ಳಿಯಲ್ಲಿ ಅಪ್ರಾಪ್ತೆಯ ಕಡೆಯವರಿಂದ ಪ್ರಿಯಕರನ ಮನೆಯ ಪೀಠೋಪಕರಣ ದ್ವಂಸವಾಗಿರುವುದು.   

ಕುಣಿಗಲ್: ಅಪ್ರಾಪ್ತೆ ಹಾಗೂ ಆಕೆಯ ಪ್ರಿಯಕರ ಪರಾರಿಯಾಗಿದ್ದು, ಆಕ್ರೋಶಗೊಂಡ ಆಕೆಯ ಸಂಬಂಧಿಕರು ಹುಡುಗನ ಮನೆ ಸೇರಿದಂತೆ ಆತನ ಸಂಬಂಧಿಗಳ ಮೂರು ಮನೆಗಳ ಮೇಲೆ ದಾಳಿ ನಡೆಸಿ ಪೀಠೋಪಕರಣ ಧ್ವಂಸಗೊಳಿಸಿದ ಘಟನೆ ತಾಲ್ಲೂಕಿನ ಗ್ರಾಮದಲ್ಲಿ ನಡೆದಿದೆ.

ಈ ಇಬ್ಬರು ಪಲಾಯನಗೊಂಡ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಬಾಲಕಿಯರ ಕಡೆಯುವರು ಮನೆಗಳಿಗೆ ನುಗ್ಗಿ ದಾಂದಲೆ ನಡೆಸಿದ್ದಾರೆ. ದ್ವಿಚಕ್ರವಾಹನವೊಂದಕ್ಕೆ ಬೆಂಕಿ ಹಚ್ಚಿದ್ದಾರೆ. ಜಗಳ ಬಿಡಿಸಲು ಬಂದ ಗ್ರಾ.ಪಂ. ಸದಸ್ಯೆ ಗಾಯಗೊಂಡಿದ್ದಾರೆ. ಈ ಬಗ್ಗೆ ದೂರು ದಾಖಲಾಗಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT