ADVERTISEMENT

ದೋಬಿಘಾಟ್ ಹತ್ತಿರ ಸರಗಳ್ಳತನ

​ಪ್ರಜಾವಾಣಿ ವಾರ್ತೆ
Published 12 ಮೇ 2019, 20:24 IST
Last Updated 12 ಮೇ 2019, 20:24 IST

ತುಮಕೂರು: ನಗರದ ದೋಬಿಘಾಟ್ ಹತ್ತಿರ ಭಾನುವಾರ ಸಂಜೆ ದುಷ್ಕರ್ಮಿ ಮಾಂಗಲ್ಯ ಸರ ದೋಚಿದ್ದಾನೆ.

ಅಶೋಕನಗರ 8ನೇ ಕ್ರಾಸ್‌ ನಿವಾಸಿ ಉಮಾದೇವಿ ಸರ ಕಳೆದುಕೊಂಡವರು. ಸಂಜೆ ದೋಬಿಘಾಟ್ ಪಕ್ಕದ ಪಾರ್ಕ್‌
ನಲ್ಲಿ ಮೊಮ್ಮಗ ಮತ್ತು ನಾಯಿ ಮರಿಯೊಂದಿಗೆ ಬಂದಿದ್ದರು. ಮೊಮ್ಮಗ ನನ್ನು ಆಡಿಸುತ್ತಿದ್ದಾಗ ದುಷ್ಕರ್ಮಿ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿ ಯಾಗಿದ್ದಾನೆ. ₹ 1.65 ಲಕ್ಷ ಮೊತ್ತದ ಸರ ದೋಚಲಾಗಿದೆ ಎಂದು ಉಮಾದೇವಿ ಅವರು ಹೊಸಬಡಾವಣೆ ಠಾಣೆಗೆ ದೂರು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT