ADVERTISEMENT

ಸಾಮರಸ್ಯ ಜಾಗೃತಿ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2022, 3:15 IST
Last Updated 20 ಸೆಪ್ಟೆಂಬರ್ 2022, 3:15 IST
ಕೋಡಿನಾಗೇನಹಳ್ಳಿಯಲ್ಲಿ ಸಾಮರಸ್ಯ ಜಾಗೃತಿ ಮೂಡಿಸಿದ ವಿಭವ ವಿದ್ಯಾಶಂಕರ ಸ್ವಾಮೀಜಿ
ಕೋಡಿನಾಗೇನಹಳ್ಳಿಯಲ್ಲಿ ಸಾಮರಸ್ಯ ಜಾಗೃತಿ ಮೂಡಿಸಿದ ವಿಭವ ವಿದ್ಯಾಶಂಕರ ಸ್ವಾಮೀಜಿ   

ಗುಬ್ಬಿ: ತಾಲ್ಲೂಕಿನ ನಿಟ್ಟೂರು ಹೋಬಳಿಯ ಕೋಡಿನಾಗೇನಹಳ್ಳಿಯಲ್ಲಿ ಸೋಮವಾರ ಸಾಮಾಜಿಕ ಸಾಮರಸ್ಯ ವೇದಿಕೆಯಿಂದ ಸಾಮರಸ್ಯ ಜಾಗೃತಿ ಕಾರ್ಯಕ್ರಮ
ನಡೆಯಿತು.

ಗ್ರಾಮದ ಎಲ್ಲಾ ಸಮುದಾಯದ ಮನೆಗಳಿಗೆ ತೆರಳಿ ಸಾಮರಸ್ಯ ಕುರಿತು ಜಾಗೃತಿ ಮೂಡಿಸಲಾಯಿತು.

ಗೊಲ್ಲಹಳ್ಳಿ ಮಠದ ವಿಭವ ವಿದ್ಯಾಶಂಕರ ಸ್ವಾಮೀಜಿ ಮಾತನಾಡಿ, ಎಲ್ಲಾ ತಾರತಮ್ಯವನ್ನು ಬದಿಗೊತ್ತಿ ಮಾನವೀಯತೆಯನ್ನು ಮೈಗೂಡಿಸಿಕೊಂಡು ಮಾನವ ಧರ್ಮ ವನ್ನು ಉದ್ಧಾರ ಮಾಡ ಬೇಕಾಗಿದೆ ಎಂದು ತಿಳಿಸಿದರು.

ADVERTISEMENT

ಮುಖಂಡ ಶಿವಕುಮಾರ್ ಮಾತನಾಡಿದರು. ಗ್ರಾಮ ಪಂಚಾಯಿತಿ ಸದಸ್ಯರಾದ ಪ್ರಸಾದ್, ಜಯಮಾಲಾ, ಮಂಜುನಾಥ್, ಲಕ್ಷ್ಮೀಪತಿ, ಮುಖಂಡರಾದ ದಿವಾಕರಯ್ಯ, ಗುರುಶಾಂತಪ್ಪ, ಅ.ನ. ಲಿಂಗಪ್ಪ, ಶಿವಕುಮಾರ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.