ತಿಪಟೂರು: ಕೊರೊನಾದಿಂದ ಸಂಕಷ್ಟಕ್ಕೆ ಸಿಲುಕಿರುವ ಜನತೆಗೆ ಅಗತ್ಯ ನೆರವು, ಮಾಹಿತಿ ನೀಡುವ ಸಲುವಾಗಿ ತಾಲ್ಲೂಕು ಆಡಳಿತದಿಂದ ಸಹಾಯವಾಣಿ (ಹೆಲ್ತ್ವಾರ್ ರೂಂ) ಪ್ರಾರಂಭಿಸಲಾಗಿದೆ.
ಸಹಾಯವಾಣಿ ಸಂಖ್ಯೆ ‘08134-251039’ಗೆ ಕರೆಮಾಡಿ ಸಾರ್ವಜನಿಕರು ಕೊರೊನಾ ಬಗ್ಗೆ ಮಾಹಿತಿ ಪಡೆಯಬಹುದಾಗಿದೆ. ಅಲ್ಲದೇ, ಹೆಲ್ತ್ವಾರ್ ರೂಂನಲ್ಲಿ 4 ಜನ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದು, ಅದರಲ್ಲಿ ಒಬ್ಬರು ಮುಖ್ಯ ವೈದ್ಯರಿರುತ್ತಾರೆ. ವಾರ್ರೂಂಗೆ ಬರುವ ಕರೆ ಸ್ವೀಕರಿಸಿ ಮಾತನಾಡುವ ಜೊತೆಗೆ ಕೊರೊನಾ ಸೋಂಕಿತರಾಗಿ ಮನೆಯಲ್ಲಿಯೇ ಚಿಕಿತ್ಸೆ ಪಡೆದುಕೊಳ್ಳುತ್ತಿರುವವರಿಗೆ ನಿತ್ಯವೂ ಕರೆ ಮಾಡಿ ಅಗತ್ಯ ಮಾಹಿತಿ ಒದಗಿಸುವ ಜೊತೆಗೆ ಚಿಕಿತ್ಸೆ ಬಗ್ಗೆ ಮನವರಿಕೆ ಮಾಡಿಕೊಡುತ್ತಿದ್ದಾರೆ.
ಕೋವಿಡ್ ಲಕ್ಷಣಗಳ ಬಗ್ಗೆ ತಾತ್ಸಾರ ಮನೋಭಾವ ಹೊಂದಿರುವ ಅನೇಕ ಸಾರ್ವಜನಿಕರು ಆಸ್ಪತ್ರೆಗೆ ಬಂದು ಪರೀಕ್ಷೆಗೆ ಒಳಗಾಗುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ಪಡೆದುಕೊಂಡಾಗ ಅವರ ಮನಸ್ಸು ಪರಿವರ್ತಿಸಿ ಆಸ್ಪತ್ರೆಗೆ ಚಿಕಿತ್ಸೆ ಪಡೆಯಲು ಕರೆ ತಂದಿರುವ ನಿದರ್ಶನ ನೂರಾರಿವೆ.
ಹೆಲ್ತ್ವಾರ್ರೂಂಗೆ ಶಾಸಕ ಬಿ.ಸಿ.ನಾಗೇಶ್ ದಿಢೀರ್ ಭೇಟಿ ನೀಡಿ ಕಾರ್ಯವೈಕರಿ ಪರಿಶೀಲಿಸಿದರು. ಹಲವು ರೋಗಿಗಳೊಂದಿಗೆ ಸಂಭಾಷಣೆ ನಡೆಸಿ ಧೈರ್ಯತುಂಬಿದರು. ಅಧಿಕಾರಿಗಳಿಗೆ ಗುಣಮಟ್ಟವನ್ನು ಇದೇ ರೀತಿ ಕಾಪಾಡಿಕೊಂಡು ಹೋಗುವಂತೆ ಸೂಚಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.