ADVERTISEMENT

ಹುಳಿಯಾರು: ಕೆರೆಯಲ್ಲಿ ಕಾಲು ಜಾರಿ ಬಾಲಕ ಸಾವು, ‘ಆಧಾರ್‌’ಗೆ ಬಂದಿದ್ದರು ತಾಯಿ

​ಪ್ರಜಾವಾಣಿ ವಾರ್ತೆ
Published 19 ಜೂನ್ 2019, 8:41 IST
Last Updated 19 ಜೂನ್ 2019, 8:41 IST
ಬಾಲಕನ ಶವದ ಎದುರು ರೋದಿಸುತ್ತಿರುವ ತಾಯಿ
ಬಾಲಕನ ಶವದ ಎದುರು ರೋದಿಸುತ್ತಿರುವ ತಾಯಿ   

ಹುಳಿಯಾರು (ತುಮಕೂರು ಜಿಲ್ಲೆ): ಸಮೀಪದ ಯಳನಡು ಗ್ರಾಮದ ಕೆರೆಯಲ್ಲಿ ಬಳ್ಳೆಕಟ್ಟೆ ಗ್ರಾಮದ ಖಲೀಲ್ (13) ಎಂಬ ಬಾಲಕ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾನೆ.

ಯಳನಡು ಗ್ರಾಮದ ಕಾವೇರಿ ಕಲ್ಪತರು ಬ್ಯಾಂಕಿನಲ್ಲಿ ಅಧಾರ್ಕಾರ್ಡ್ ಮಾಡಿಸಲು ಬೆಳಿಗ್ಗೆ 5 ಗಂಟೆಗೆ ತಾಯಿ ಶಾಹೀದಾ ಬೇಗಂ ಅವರೊಂದಿಗೆ ಬಳ್ಳೆಕಟ್ಟೆ ಗ್ರಾಮದಿಂದ ತೆರಳಿದ್ದನು. ಕೆರೆ ಬಳಿ ಈತ ಶೌಚಕ್ಕೆ ಹೋಗಿದ್ದ ವೇಳೆ ಕೆರೆಯಲ್ಲಿ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾನೆ.

ಬಹಳ ಹೊತ್ತಾದರೂ ಮಗ ಬರದೇ ಇದ್ದಾಗ ತಾಯಿ ಹುಡುಕಾಟ ನಡೆಸಿದಾಗ ಮಗ ಕೆರೆಯಲ್ಲ ಬಿದ್ದು ಮೃತಪಟ್ಟಿರುವುದು ಗೊತ್ತಾಗಿದೆ. ಗ್ರಾಮದ ಬಸವೇಶ್ವರ ಶಾಲೆಯ 8ನೇ ತರಗತಿ ವಿದ್ಯಾರ್ಥಿಯಾಗಿದ್ದನು. ಹುಳಿಯಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.