ADVERTISEMENT

ವಿದೇಶ ಪ್ರಯಾಣಿಕರ ಮಾಹಿತಿ ನೀಡಿ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2020, 11:23 IST
Last Updated 14 ಮಾರ್ಚ್ 2020, 11:23 IST

ತುಮಕೂರು: ಕೋವಿಡ್‌–19 ರಾಜ್ಯದಲ್ಲಿ ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

ಕಳೆದ 14 ದಿನಗಳಲ್ಲಿ ಯಾರಾದರೂ ವಿದೇಶ ಪ್ರಯಾಣ ಮಾಡಿದ್ದಲ್ಲಿ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.

ಜಿಲ್ಲೆಯ ನಾಗರಿಕರು ಕೋವಿಡ್‌–19 ಸೋಂಕು ಕಂಡು ಬಂದರೆ ಅಥವಾ ವಿದೇಶ ಪ್ರಯಾಣ ಮಾಡಿದವರಿದ್ದರೆ ಸಹಾಯವಾಣಿ 0816–2278387, 2251414, 94498 43269, 94498 43064, 104ಕ್ಕೆ ಕರೆ ಮಾಡಿ ಮಾಹಿತಿ ನೀಡುವಂತೆ ಅವರು ಕೋರಿದ್ದಾರೆ.

ADVERTISEMENT

ಮಾಸ್ಕ್‌ನಿಂದ ಅಪಾಯವೇ ಹೆಚ್ಚು

ಆರೋಗ್ಯವಂತ ವ್ಯಕ್ತಿಗಳು ಮುಖಗವಸು(ಮಾಸ್ಕ್‌) ಬಳಸಬೇಕಾಗಿರುವುದಿಲ್ಲ. ಅನಾವಶ್ಯಕವಾಗಿ ಉಪಯೋಗಿಸುವ ಮುಖಗವಸುಗಳಿಂದ ಉಪಯುಕ್ತಕ್ಕಿಂತ ತೊಂದರೆಗಳೇ ಹೆಚ್ಚು. ಹಾಗಾಗಿ ಸಂಶಯಾಸ್ವದ ಸೋಂಕಿತರನ್ನು ಆರೈಕೆ ಮಾಡುವವರು ಹಾಗೂ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುವ ವೈದ್ಯರು, ಸಿಬ್ಬಂದಿ ಮಾತ್ರವೇ ಮುಖಗವಸು ಬಳಸಲು ಕೋರಲಾಗಿದೆ.

ಕೊಕ್ಕೊ ಕ್ರೀಡಾಕೂಟ ಮುಂದೂಡಿ

ಕರೊನಾ ಸೋಂಕು, ದ್ವಿತೀಯ ಪಿಯುಸಿ ಪರೀಕ್ಷೆ, ಮೈದಾನ ಅಲಭ್ಯದ ಕಾರಣ ತುಮಕೂರಿನಲ್ಲಿ ನಡೆಯಬೇಕಿದ್ದ 65ನೇ ಎಸ್‌ಜಿಎಫ್‌ಐ ಬಾಲಕಿಯರ 19 ವರ್ಷದೊಳಗಿನ ರಾಷ್ಟ್ರಮಟ್ಟದ ಕ್ರೀಡಾಕೂಟ ಮುಂದೂಡುವಂತೆ ತುಮಕೂರು ಜಿಲ್ಲೆ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಇಲಾಖೆಯ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.