ADVERTISEMENT

ತೋವಿನಕೆರೆ: ಹುಣಸೆ ಮರದಿಂದ ಬಿದ್ದು ಕಾರ್ಮಿಕ ಸಾವು

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2024, 13:44 IST
Last Updated 28 ಮಾರ್ಚ್ 2024, 13:44 IST
ಹುಣಸೆ ಮರದಿಂದ ಬಿದ್ದು ಮೃತಪಟ್ಟಿರುವ ಸ್ಥಳಕ್ಕೆ ಕೊರಟಗೆರೆ ಪೋಲಿಸ್‌ ಸಬ್‌ಇನ್‌ಸ್ಪೆಕ್ಟರ್‌ ಭೇಟಿ ನೀಡಿ ಪರಿಶೀಲಿಸಿದರು
ಹುಣಸೆ ಮರದಿಂದ ಬಿದ್ದು ಮೃತಪಟ್ಟಿರುವ ಸ್ಥಳಕ್ಕೆ ಕೊರಟಗೆರೆ ಪೋಲಿಸ್‌ ಸಬ್‌ಇನ್‌ಸ್ಪೆಕ್ಟರ್‌ ಭೇಟಿ ನೀಡಿ ಪರಿಶೀಲಿಸಿದರು   

ತೋವಿನಕೆರೆ: ಹುಣಸೆ ಹಣ್ಣು ಬಡಿಯಲು ಮರ ಹತ್ತಿದ್ದ ಕೂಲಿ ಕಾರ್ಮಿಕ ಮಂಜುನಾಥ (32) ಮರದಿಂದ ಬಿದ್ದು ಗುರುವಾರ ಮೃತಪಟ್ಟಿದ್ದಾರೆ.

ಕಬ್ಬಿಗೆರೆ ಜವರೇಗೌಡರ ಹುಣಸೆ ಮರದಲ್ಲಿನ ಹಣ್ಣನು ಕೀಳಲು ಗುಬ್ಬಿ ತಾಲ್ಲೂಕು ಚೇಳೂರು ಹೋಬಳಿ ಗುಡದ್ದ ಜೋಗಿಹಳ್ಳಿಯ ಮಂಜುನಾಥ ಬಂದಿದ್ದರು.

ಮರ ಹತ್ತಿ ಹಣ್ಣನ್ನು ಕೋಲಿನಿಂದ ಬಡಿಯುವಾಗ ಆಯತಪ್ಪಿ ಬಿದ್ದಿದ್ದಾರೆ.

ADVERTISEMENT

ಕೊರಟಗೆರೆ ಪೋಲಿಸ್ ಠಾಣೆ ಸಿಬ್ಬಂದಿ ಸ್ಥಳಕ್ಕೆ ಬಂದು ದೂರು ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.