ADVERTISEMENT

ಬಳುವನೆರಲು: ಜಮೀನು ವಿವಾದ– ತಮ್ಮನನ್ನು ಕೊಂದ ಅಣ್ಣ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2023, 6:02 IST
Last Updated 29 ಮಾರ್ಚ್ 2023, 6:02 IST
ಪಾವಗಡ ತಾಲ್ಲೂಕಿನ ಕರಿಯಮ್ಮನ ಪಾಳ್ಯದಲ್ಲಿ ಗಾದ್ರಿ ಪಾಲನಾಯಕ ದೇವರ ಉತ್ಸವ ನಡೆಯಿತು
ಪಾವಗಡ ತಾಲ್ಲೂಕಿನ ಕರಿಯಮ್ಮನ ಪಾಳ್ಯದಲ್ಲಿ ಗಾದ್ರಿ ಪಾಲನಾಯಕ ದೇವರ ಉತ್ಸವ ನಡೆಯಿತು   

ತಿಪಟೂರು: ಜಮೀನಿನ ವಿವಾದವು ತಮ್ಮನ ಕೊಲೆಯಲ್ಲಿ ಅಂತ್ಯಗೊಂಡಿರುವ ಘಟನೆ ತಾಲ್ಲೂಕಿನ ಹೊನ್ನವಳ್ಳಿ ಹೋಬಳಿಯ ಬಳುವನೆರಲು ಗ್ರಾಮದಲ್ಲಿ ಮಂಗಳವಾರ ನಡೆದಿದೆ.

ಚಂದ್ರಪ್ಪ(63) ಕೊಲೆಯಾದವರು. ಅಣ್ಣ ರಾಮೇಗೌಡ ಮತ್ತು ಚಂದ್ರಪ್ಪ ಅವರ ನಡುವೆ ಜಮೀನು ಹಂಚಿಕೆ ವಿಚಾರವಾಗಿ ಆಗಾಗ್ಗೆ ಜಗಳ ನಡೆಯುತ್ತಿತ್ತು. ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿದೆ. ಬೆಳಿಗ್ಗೆ ಕೂಡ ಇಬ್ಬರ ನಡು‌ವೆ ಜಗಳವಾಗಿದೆ. ರಾಮೇಗೌಡ ಬಲವಾದ ಆಯುಧದಿಂದ ಚಂದ್ರಪ್ಪ ಅವರ ಮೇಲೆ ಹಲ್ಲೆ ನಡೆಸಿದ್ದರಿಂದ ಅವರು ಮೃತಪಟ್ಟಿದ್ದಾರೆ.

ಆರೋಪಿ ರಾಮೇಗೌಡನನ್ನು ‍ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಹೊನ್ನವಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.