ADVERTISEMENT

ಮೇಯುತ್ತಿದ್ದ ಕುರಿ ಮೇಲೆ ಚಿರತೆ ದಾಳಿ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2023, 16:24 IST
Last Updated 15 ಆಗಸ್ಟ್ 2023, 16:24 IST
ಚಿರತೆ
ಚಿರತೆ    

ಗುಬ್ಬಿ: ಕಸಬಾ ಹೋಬಳಿ ಮಡೇನಹಳ್ಳಿಯಲ್ಲಿ ಮಂಗಳವಾರ ಚಿರತೆ ದಾಳಿ ನಡೆಸಿ ಜಮೀನಿನಲ್ಲಿ ಮೇಯುತಿದ್ದ ಕುರಿಯನ್ನು ಸಾಯಿಸಿದೆ.

ಗ್ರಾಮದ ತುರಿಯಪ್ಪ ಸಾಕಿದ್ದ ಒಂದು ಕುರಿಯನ್ನು ಹೊಲದಲ್ಲಿ ಮೇಯಿಸುತ್ತಿದ್ದ ಸಂದರ್ಭದಲ್ಲಿ ಪೊದೆಯಿಂದ ಏಕಾಏಕಿ ದಾಳಿ ನಡೆಸಿದ ಚಿರತೆ ಕುರಿಯನ್ನು ಕೊಂದಿದೆ.

ತುರಿಯಪ್ಪ ಕೂಗಾಟ ನಡೆಸಿದ್ದರಿಂದ ಅಕ್ಕಪಕ್ಕದವರು ಸೇರುವುದರೊಳಗೆ ಚಿರತೆ ಪೊದೆಯಲ್ಲಿ ಕಣ್ಮರೆಯಾಗಿದೆ.

ADVERTISEMENT

ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ತೆರಳಿ ಪರಿಶೀಲನೆ ನಡೆಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.