ADVERTISEMENT

ತುಮಕೂರು | ಬೋನಿಗೆ ಬಿದ್ದ ಚಿರತೆ: ಜನ ನಿರಾಳ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2022, 7:12 IST
Last Updated 15 ಡಿಸೆಂಬರ್ 2022, 7:12 IST
ಬೋನಿಗೆ ಬಿದ್ದಿರುವ ಚಿರತೆ
ಬೋನಿಗೆ ಬಿದ್ದಿರುವ ಚಿರತೆ   

ಕೊಡಿಗೇನಹಳ್ಳಿ (ತುಮಕೂರು ಜಿಲ್ಲೆ):ಮಧುಗಿರಿ ತಾಲೂಕಿನಮಿಡಿಗೇಶಿ ಹೋಬಳಿಯ ವೀರಾಪುರ ಗ್ರಾಮದಲ್ಲಿ ಸುಮಾರು 1 ವರ್ಷದ ಗಂಡು ಚಿರತೆ ಗುರುವಾರ ಬೋನಿಗೆ ಬಿದ್ದಿದೆ.

ಕಳೆದ ಕೆಲ ದಿನಗಳಿಂದ ಚಿರತೆ ಹಾವಳಿಯಿಂದಾಗಿ ರೈತರು ಆತಂಕಕ್ಕೆ ಒಳಗಾಗಿದ್ದರು.

ಚಿರತೆ ಹಿಡಿಯಲು ಗ್ರಾಮದ ರಾಮೇಗೌಡ ಎಂಬುವವರ ಜಮೀನಿನಲ್ಲಿ ಬೋನು ಇರಿಸಲಾಗಿತ್ತು. ಬೋನಿನೊಳಗೆ ಸತ್ತ ನಾಯಿಯನ್ನು ಇರಿಸಲಾಗಿತ್ತು.

ADVERTISEMENT

ನಾಯಿಯನ್ನು ನೋಡಿ ಬೋನಿನೊಳಗೆ ಬಂದ ಚಿರತೆ ಸೆರೆಯಾಗಿದೆ.

ಚಿರತೆಯನ್ನು ಬೆಂಗಳೂರಿನಬನ್ನೇರುಘಟ್ಟಕ್ಕೆ ಕಳುಹಿಸಲಾಗುವುದು ಎಂದು ಅರಣ್ಯ ಅಧಿಕಾರಿ ರವಿ ಮತ್ತು ಮುತ್ತುರಾಜ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.