
ಪ್ರಜಾವಾಣಿ ವಾರ್ತೆ
ಸಾವು–ಪ್ರಾತಿನಿಧಿಕ ಚಿತ್ರ
ತುಮಕೂರು: ನಿಡವಂದ– ಹಿರೇಹಳ್ಳಿ ರೈಲು ನಿಲ್ದಾಣದ ಮಧ್ಯೆ ರೈಲಿಗೆ ಸಿಲುಕಿ ಸುಮಾರು 45 ವರ್ಷದ ಅಪರಿಚಿತ ವ್ಯಕ್ತಿ ಮೃತಪಟ್ಟಿದ್ದಾರೆ.
ಗೋಧಿ ಮೈಬಣ್ಣ, ಬಲಗೈನ ಮುಂಗೈ ಮೇಲೆ ‘ನಾನ್ನ’ ಎಂದು ಇಂಗ್ಲಿಷ್ ಅಚ್ಚೆ, ಒಂದು ರಾಜನ ಕಿರೀಟದ ರೀತಿಯ ಅಚ್ಚೆ ಇರುತ್ತದೆ. ಕಡು ನೀಲಿ ಬಣ್ಣದ, ಚೌಕಳಿ ಇರುವ ತುಂಬು ತೋಳಿನ ಶರ್ಟ್, ಪಾಚಿ ಬಣ್ಣದ ಪ್ಯಾಂಟ್ ಧರಿಸಿದ್ದಾರೆ. ಮಾಹಿತಿಗೆ ರೈಲ್ವೆ ಪೊಲೀಸ್ ಕಂಟ್ರೋಲ್ ರೂಂ ದೂರವಾಣಿ 080–22871291, ಮೊ 9480802142 ಸಂಪರ್ಕಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.