ಗುಬ್ಬಿ: ತಾಲ್ಲೂಕಿನಲ್ಲಿ ಸತತವಾಗಿ ಮಳೆ ಸುರಿಯುತ್ತಿದ್ದು ಇದರಿಂದ ಹಳೆಯ ಮನೆ ಗೋಡೆಗಳು ಕುಸಿಯುತ್ತಿವೆ.
ಶನಿವಾರ ಬೆಳಗ್ಗೆ ನಿಟ್ಟೂರು ಹೋಬಳಿ ಮುದ್ದಾಪುರ ಗ್ರಾಮದ ಗೊಲ್ಲರಹಟ್ಟಿಯಲ್ಲಿ ಮನೆ ಗೋಡೆ ಕುಸಿದು ಉಗ್ರಯ್ಯ (60) ಮೃತಪಟ್ಟಿದ್ದಾರೆ.
ಮುದ್ದಾಪುರದ ತನ್ನ ಮಾವನ ಮನೆಗೆ ಪಿತೃಪಕ್ಷದ ಹಬ್ಬಕ್ಕೆ ಬಂದಿದ್ದು ಇಂದು ಬೆಳಗ್ಗೆ ಗ್ರಾಮದ ನಾಗರಾಜುರವರ ಕೊಟ್ಟಿಗೆ ಮನೆಯ ಪಕ್ಕದ ಕಾಲುದಾರಿಯಲ್ಲಿ ನಡೆದುಕೊಂಡು ಹೋಗುವಾಗ ಮನೆಯ ಗೋಡೆಯು ಕುಸಿದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.