ತುಮಕೂರು: ನಗರದ ಹೊರ ವಲಯದ ವರ್ತುಲ ರಸ್ತೆಯ ಶೆಟ್ಟಿಹಳ್ಳಿ ಸಿಗ್ನಲ್ ಬಳಿ ಗುರುವಾರ ಬೆಳಿಗ್ಗೆ ಟಿವಿಎಸ್ ಮೊಪೆಡ್ಗೆ ಸರಕು ಸಾಗಣೆ ವಾಹನ ಡಿಕ್ಕಿ ಹೊಡೆದು ವ್ಯಕ್ತಿಯೊಬ್ಬರು ಮೃತ ಪಟ್ಟಿದ್ದಾರೆ.
ಗಾರೆ ಕೆಲಸ ಮಾಡುತ್ತಿದ್ದ ನಗರದ ಗೂಳರವೆಯ ಮೂರ್ತಪ್ಪ (55) ಮೃತಪಟ್ಟವರು. ಶೆಟ್ಟಿಹಳ್ಳಿ ಎಚ್ಎಂಎಸ್ ಕಾಲೇಜು ಕಡೆಯಿಂದ ಮೊಪೆಡ್ನಲ್ಲಿ ಬಂದು ಸಿಗ್ನಲ್ನಲ್ಲಿ ಬಲ ಭಾಗಕ್ಕೆ ಚಲಿಸುತ್ತಿದ್ದಾಗ ಸರಕು ಸಾಗಣೆ ವಾಹನ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಮೊಪೆಡ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.