ADVERTISEMENT

ತಿಪಟೂರು: ತಾಯಿ, ಮಗ ನೇಣಿಗೆ ಶರಣು

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2023, 11:53 IST
Last Updated 24 ಫೆಬ್ರುವರಿ 2023, 11:53 IST
   

ತಿಪಟೂರು: ನಗರದ ಹಾಸನ ವೃತ್ತದ ಬಳಿಯ ಶಾರದನಗರದ ಮನೆಯಲ್ಲಿ ತಾಯಿ, ಮಗ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕಳೆದ ಎರಡು ದಿನಗಳಿಂದ ಮನೆಯಿಂದ ಹೊರ ಬಾರದ ಕಾರಣ ಪಕ್ಕದ ಮನೆಯವರ ಮಾಹಿತಿ ಮೇರೆಗೆ ಶುಕ್ರವಾರ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲಿಸಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ.

ಸೌರಭ ಅಶೋಕ್ (34) ಹಾಗೂ ಪುತ್ರ ತನ್ವಿತ್ ಆರ್ಯ (6) ಮೃತರು. ಹಾಸನ ಜಿಲ್ಲೆ, ಬೇಲೂರು ತಾಲ್ಲೂಕಿನ ವೈ.ಮೂಳೇನಹಳ್ಳಿ ಗ್ರಾಮದವರು. ಸೌರಭ ಪತಿ ಅಶೋಕ್ ಡಿಸೆಂಬರ್ ತಿಂಗಳಲ್ಲಿ ಮೃತಪಟ್ಟಿದ್ದು, ಮನನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.