ADVERTISEMENT

ನಂಜಾವಧೂತ ಸ್ವಾಮೀಜಿಗೆ ಪಿತೃ ವಿಯೋಗ

​ಪ್ರಜಾವಾಣಿ ವಾರ್ತೆ
Published 20 ಜೂನ್ 2020, 10:40 IST
Last Updated 20 ಜೂನ್ 2020, 10:40 IST
ಕೃಷ್ಣಯ್ಯ
ಕೃಷ್ಣಯ್ಯ   

ಪಟ್ಟನಾಯಕನಹಳ್ಳಿ: ಇಲ್ಲಿನ ಗುರುಗುಂಡಬ್ರಹ್ಮೇಶ್ವರ ಸ್ವಾಮಿ ಮಠದ ಪೀಠಾಧ್ಯಕ್ಷ ನಂಜಾವಧೂತ ಸ್ವಾಮೀಜಿ ಪೂರ್ವಾಶ್ರಮದ ತಂದೆ ಕೃಷ್ಣಯ್ಯ (80) ಶುಕ್ರವಾರ ಚಿತ್ರದುರ್ಗದ ತಮ್ಮ ನಿವಾಸದಲ್ಲಿ ನಿಧನರಾದರು. ಸ್ವಾಮೀಜಿ ಸೇರಿದಂತೆ ಇಬ್ಬರು ಗಂಡು ಮಕ್ಕಳು ಮತ್ತು ನಾಲ್ಕು ಮಂದಿ ಹೆಣ್ಣು ಮಕ್ಕಳು ಇವರಿಗೆ ಇದ್ದಾರೆ.

ಸ್ವಗ್ರಾಮ ಶಿರಾ ತಾಲ್ಲೂಕಿನ ಯಾದಲಡಕುನಲ್ಲಿ ಅಂತ್ಯಕ್ರಿಯೆ ನೆರವೇರಿತು. ಶಿರಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕೆಲಸ ಆರಂಭಿಸಿದ ಕೃಷ್ಣಯ್ಯ, ಚಳ್ಳಕೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾಗಿಯೂ ಕೆಲಸ ಮಾಡಿದರು. ಚಿತ್ರದುರ್ಗ ಪದವಿ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದ ಅವರು 2003ರಲ್ಲಿ ನಿವೃತ್ತರಾದರು. ಚಿತ್ರದುರ್ಗದಲ್ಲಿಯೇ ನೆಲೆಸಿದರು.

ಕೃಷ್ಣಯ್ಯ ಅವರ ಕುಟುಂಬ ಅವಧೂತ ಪರಂಪರೆಯದ್ದು. ಅವರ ಅಣ್ಣ ಸಹ ಗುರುಗುಂಡಬ್ರಹ್ಮೇಶ್ವರ ಸ್ವಾಮಿ ಮಠದ ಪೀಠಾಧ್ಯಕ್ಷರಾಗಿದ್ದರು. ಇವರ ನಂತರ ತಮ್ಮ ಕಿರಿಯ ಪುತ್ರನಿಗೆ ದೀಕ್ಷೆ ಕೊಡಿಸಿ ನಂಜಾವಧೂತ ಸ್ವಾಮೀಜಿ ಅವರನ್ನು ಪೀಠಾಧ್ಯಕ್ಷರನ್ನಾಗಿ ಮಾಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.