ADVERTISEMENT

ಕಿರೀಟ ಧಾರಣೆ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2020, 4:05 IST
Last Updated 27 ಅಕ್ಟೋಬರ್ 2020, 4:05 IST
ಕಾಳಿಕಾಂಬ ಮೂರ್ತಿಯ ನಾಗಾಭರಣ ಕಿರೀಟ ಧಾರಣೆ
ಕಾಳಿಕಾಂಬ ಮೂರ್ತಿಯ ನಾಗಾಭರಣ ಕಿರೀಟ ಧಾರಣೆ   

ಹುಲಿಯೂರುದುರ್ಗ: ದೀಪಾಂಬುದಿ ಕಾಳಿಕಾಂಬ ದೇವಾಲಯದಲ್ಲಿ ಶರನ್ನವರಾತ್ರಿ ಪ್ರಯುಕ್ತ ವಿಶೇಷ ಪೂಜೆ, ಅಭಿಷೇಕ ಹಾಗೂ ಮಹಾಮಂಗಳಾರತಿ ಕಾರ್ಯಕ್ರಮ ನಡೆಯಿತು.

ಅಮೃತೂರಿನ ಎಚ್.ಆರ್. ನಾಗಮಣಿ ಕುಟುಂಬದ ಸದಸ್ಯರು ಕೊಡುಗೆಯಾಗಿ ನೀಡಿದ ನಾಗಾಭರಣ ಕಿರೀಟವನ್ನು ದೇವತಾ ಮೂರ್ತಿಗೆ ಧಾರಣೆ ಮಾಡಲಾಯಿತು. ಅರ್ಚಕ ದಾಮೋದರ್ ನವರಾತ್ರಿ ದಿನದ ಅರ್ಚನೆ, ಆರಾಧನಾ ಕಾರ್ಯಕ್ರಮಗಳನ್ನು ವಿಧಿವತ್ತಾಗಿ ನೆರವೇರಿಸಿದರು. ಜನರು ಶ್ರದ್ಧಾಭಕ್ತಿಯಿಂದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ದೇವತಾ ಮೂರ್ತಿಯ ದರ್ಶನ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT