ADVERTISEMENT

ಕ್ರೇನ್ ಗೆ ಒಮಿನಿ ವ್ಯಾನ್ ಡಿಕ್ಕಿ, ನಾಲ್ವರ ಸಾವು

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2018, 5:09 IST
Last Updated 5 ಸೆಪ್ಟೆಂಬರ್ 2018, 5:09 IST
   

ಶಿರಾ: ತುಮಕೂರು- ಶಿರಾ ನಡುವಿನ 48ರ ರಾಷ್ಟ್ರೀಯ ಹೆದ್ದಾರಿಯ ತರೂರು ಗೇಟ್ ಬಳಿ ಕ್ರೇನ್ ಗೆ ಒಮಿನಿ ವ್ಯಾನ್ ಡಿಕ್ಕಿ ಹೊಡೆದು ನಾಲ್ವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಮೃತಪಟ್ಟವರ ಗುರುತು ಪತ್ತೆ ಕಾರ್ಯವನ್ನು ಪೊಲೀಸರು ನಡೆಸುತ್ತಿದ್ದಾರೆ.

ಬೆಂಗಳೂರು ಗ್ರಾಮಾಂತರದ ಕಿತ್ತನಹಳ್ಳಿಯ ಪ್ರಜ್ವಲ್, ಅನಿಲ್ ಕುಮಾರ್, ಮಲ್ಲಸಂದ್ರದ ಅಶೋಕ್ ಎಂಬುವರು ಗಾಯಗೊಂಡಿದ್ದಾರೆ. ಮೃತರುಒಮಿನಿ ವ್ಯಾನಿನಲ್ಲಿ ಬೆಂಗಳೂರಿನಿಂದ ಗೋವಾಕ್ಕೆ ಹೊರಟಿದ್ದರೆನ್ನಲಾಗಿದೆ.

ADVERTISEMENT

ತರೂರು ಗೇಟ್ ಬಳಿ ಕೆಟ್ಟು ನಿಂತಿದ್ದ ಲಾರಿಯನ್ನು ಬೆಳಿಗ್ಗೆ 3 ಗಂಟೆ ವೇಳೆ ತೆರವುಗೊಳಿಸಲು ನಿಂತಿದ್ದ ಕ್ರೇನ್ ಗೆ ಅತಿ ವೇಗದಲ್ಲಿ ಬಂದ ಒಮಿನಿ ವ್ಯಾನ್ ಡಿಕ್ಕಿಯಾಗಿ ಈ ಅಪಘಾತ ಸಂಭವಿಸಿದೆ ಎಂದು ಕಳ್ಳಂಬೆಳ್ಳ ಠಾಣೆ ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.