ಹುಲಿಯೂರುದುರ್ಗ: ಮತದಾನದೊಂದಿಗೆ ಲೋಕಸಭಾ ಚುನಾವಣೆಯ ಕಾವು ಮುಕ್ತಾಯಗೊಳ್ಳುತ್ತಿದ್ದಂತೆ ರಾತ್ರಿ ಧಾರಾಕಾರವಾಗಿ ಸುರಿದ ಮಳೆಯು ಪಟ್ಟಣದ ಜನರಿಗೆ ತಂಪು ನೀಡಿತು.
ಬಿರುಸಾಗಿ ಆರಂಭಗೊಂಡ ವರ್ಷದ ಮೊದಲ ಮಳೆ ನಂತರದಲ್ಲಿ ನಿಧಾನವಾಗಿ ಸುರಿಯಿತು. 12.2 ಮಿಮೀ. ಮಳೆ ಸುರಿದುದೆ. ಬಿರುಬೇಸಿಗೆಯಲ್ಲಿ ಸುಡುವ ಕೆಂಡವಾಗಿದ್ದ ಭೂಮಿಯೂ ತಂಪಾಗಿದೆ. ಗಿಡಮರಗಳಲ್ಲಿ ಹಸಿರು, ನೆಲದ ಚಿಗುರು ಈಗ ಪಲ್ಲವಿಸತೊಡಗಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.