ತುಮಕೂರು: ಉತ್ತಮವಾಗಿ ಕಾರ್ಯನಿರ್ವಹಿಸಿದ ಗ್ರಂಥಾಲಯ ಇಲಾಖೆಯ ಹತ್ತು ನೌಕರರು ಮತ್ತು ಅಧಿಕಾರಿಗಳಿಗೆ ನಗರದಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ ರಾಜ್ಯ ಮಟ್ಟದ ಉತ್ತಮ ಗ್ರಂಥಪಾಲಕ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಗ್ರಂಥಪಾಲಕರ ದಿನಾಚರಣೆ ಪ್ರಯುಕ್ತ ಗ್ರಂಥಾಲಯ ಇಲಾಖೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಪ್ರಶಸ್ತಿ ಪ್ರದಾನ ಮಾಡಿದರು.
ಪ್ರಶಸ್ತಿ ಪುರಸ್ಕೃತರು: ಬಿ.ಕೆ.ಲಕ್ಷ್ಮಿಕಿರಣ್ (ಮುಖ್ಯ ಗ್ರಂಥಾಲಯಾಧಿಕಾರಿ, ಬಳ್ಳಾರಿ ಕೇಂದ್ರ ಗ್ರಂಥಾಲಯ), ಗ್ರಂಥಪಾಲಕರು: ಎಚ್.ಡಿ.ಬಸವರಾಜು (ತುಮಕೂರು ಕೇಂದ್ರ ಗ್ರಂಥಾಲಯ), ಬಿ.ನಮಿತಾ (ಉಡುಪಿ ಕೇಂದ್ರ ಗ್ರಂಥಾಲಯ).
ಗ್ರಂಥಾಲಯ ಸಹಾಯಕರು: ಎಲ್.ಲಕ್ಷ್ಮಿಕಾಂತ (ಕೇಂದ್ರ ಗ್ರಂಥಾಲಯ, ಬೆಂಗಳೂರು ಉತ್ತರ ವಲಯ), ಎಸ್.ಎನ್.ಹೇಮಾವತಿ (ಕೇಂದ್ರ ಗ್ರಂಥಾಲಯ, ಕೋಲಾರ), ಎಂ.ಬಿ.ಲೋಕೇಶ್ (ಕೇಂದ್ರ ಗ್ರಂಥಾಲಯ, ಬೆಂಗಳೂರು ದಕ್ಷಿಣ ವಲಯ), ಪಿ.ಜಲಜ (ಬೆಂಗಳೂರು ಪಶ್ಚಿಮ ವಲಯ), ಆರ್.ಮಂಜುನಾಥ್ (ದೇವನಹಳ್ಳಿ ಶಾಖಾ ಗ್ರಂಥಾಲಯ, ಬೆಂಗಳೂರು ಗ್ರಾಮಾಂತರ ಜಿಲ್ಲೆ), ಪರಮೇಶ್ (ಎಚ್.ಡಿ.ಕೋಟೆ ಶಾಖಾ ಗ್ರಂಥಾಲಯ, ಮೈಸೂರು), ಕುಸುಮಾವತಿ (ಮೇಲ್ವಿಚಾರಕಿ, ಕೇಂದ್ರ ಗ್ರಂಥಾಲಯ, ಬೆಂಗಳೂರು ಪಶ್ಚಿಮ ವಲಯ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.