ADVERTISEMENT

ಸೋಲಾರ್ ಪಾರ್ಕ್‌ನಲ್ಲಿ ಶಿಕ್ಷಣ ಸಚಿವರ ವಾಯುವಿಹಾರ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2019, 4:00 IST
Last Updated 20 ಸೆಪ್ಟೆಂಬರ್ 2019, 4:00 IST
   

ತುಮಕೂರು: ಪಾವಗಡ ತಾಲ್ಲೂಕಿನ ಎನ್.ಅಚ್ಚಮನಹಳ್ಳಿಯ ಶಾಲೆಯಲ್ಲಿ ವಾಸ್ತವ್ಯ ಹೂಡಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಶುಕ್ರವಾರಸೋಲಾರ್ ಪಾರ್ಕ್‌ನಲ್ಲಿ ಬೆಳಗಿನ ಜಾವ ವಾಯುವಿಹಾರ ಮಾಡಿದರು.

ಬೆಳಗ್ಗೆ 5.30 ಕ್ಕೆ ಎದ್ದ ಸಚಿವರು ನಿತ್ಯಕರ್ಮಗಳನ್ನು ಮುಗಿಸಿ ಸರ್ಕಾರಿ ಜೀಪ್ ನಲ್ಲಿ ಸೋಲಾರ್ ಪಾರ್ಕ್‌ಗೆ ತೆರಳಿದರು. ಬಿಜೆಪಿಯ ಸ್ಥಳೀಯ ಮುಖಂಡರು ಮತ್ತು ಆಪ್ತ ಸಿಬ್ಬಂದಿಯೊಂದಿಗೆ ಪಾರ್ಕ್ ನಲ್ಲಿ ವಿಹಾರ ಮಾಡಿದರು.

ವಾಯು ವಿಹಾರದ ಬಳಿಕ ಶಾಲಾ ಅಂಗಳದಲ್ಲಿ ಕುಳಿತು ಅಧಿಕಾರಿಗಳೊಂದಿಗೆ ಮಾತನಾಡುತ್ತ ದಿನಪತ್ರಿಕೆಗಳ ಮೇಲೆ ಕಣ್ಣಾಡಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.