ADVERTISEMENT

ಹಸು ಮೈ ತೊಳೆಯಲು ಹೋದ ತಾಯಿ, ಇಬ್ಬರು ಮಕ್ಕಳು ನೀರು ಪಾಲು

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2020, 16:49 IST
Last Updated 2 ಏಪ್ರಿಲ್ 2020, 16:49 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹೋಬಳಿಯ ನಲ್ಲೂರುಹಟ್ಟಿ ಬಳಿಯ ಮಲ್ಲಯ್ಯನ ಕಟ್ಟೆ (ಗೋಕಟ್ಟೆ) ಬಳಿ ಗುರುವಾರ ಹಸುಗಳನ್ನು ಮೈ ತೊಳೆಯಲು ಹೋದ ತಾಯಿ, ಇಬ್ಬರು ಮಚೇಳೂರು: ಕ್ಕಳು ನೀರುಪಾಲಾಗಿದ್ದಾರೆ.

ರತ್ನಮ್ಮ (38), ಮಕ್ಕಳಾದ ಚೇತನ್ (15), ಚಂದ್ರಿಕಾ (18) ಮೃತರು. ತಾಯಿ, ಮಗಳು ಹಸು ಮೈ ತೊಳೆಯುವಾಗ ಚೇತನ್ ನೀರಿನಲ್ಲಿ ಮುಳುಗಿದ್ದಾನೆ. ಆಗ ರತ್ನಮ್ಮ, ಚಂದ್ರಿಕಾ ಆತನನ್ನು ಎಳೆದುಕೊಳ್ಳಲು ಪ್ರಯತ್ನ ಮಾಡಿದ್ದಾರೆ. ಈಜು ಬಾರದೆ ಮೂವರೂ ನೀರಿನಲ್ಲಿ ಮುಳುಗಿದ್ದಾರೆ.

ಸ್ಥಳಕ್ಕೆ ತಹಶೀಲ್ದಾರ್ ಪ್ರದೀಪ್ ಕುಮಾರ್, ಸರ್ಕಲ್ ಇನ್‌ಸ್ಪೆಕ್ಟರ್ ರಾಮಕೃಷ್ಣ, ಸಬ್‌ಇನ್‌ಸ್ಪೆಕ್ಟರ್ ವಿಜಯ್ ಕುಮಾರ್ ಭೇಟಿ ನೀಡಿದ್ದರು. ಚೇಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.