ADVERTISEMENT

ತುಮಕೂರು: ನೀರಿನಲ್ಲಿ ಮುಳುಗಿ ಮೂವರು ಯುವಕರ ಸಾವು

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2018, 12:01 IST
Last Updated 21 ಅಕ್ಟೋಬರ್ 2018, 12:01 IST
   

ತುಮಕೂರು: ತುರುವೇಕೆರೆ ತಾಲ್ಲೂಕು ಮಣೆಚೆಂಡೂರು ಸಮೀಪ ಏತ ನೀರಾವರಿ ಯೋಜನೆಯಡಿ ನಿರ್ಮಿಸಿದ ಚೆಕ್ ಡ್ಯಾಂ ಹಿನ್ನೀರಿನಲ್ಲಿ ಈಜಾಡುವಾಗ ಹೂಳಿನಲ್ಲಿ ಸಿಲುಕಿ ಮೂವರು ಯುವಕರು ಮೃತಪಟ್ಟಿದ್ದಾರೆ.

ಮಣೆಚೆಂಡೂರು ಗ್ರಾಮದ ನವೀನ್, ಮಂಜು ಹಾಗೂ ಚನ್ನರಾಯಪಟ್ಟಣ ಸಮೀಪದ ಮಗ್ಗೆಹಳ್ಳಿಯ ವೇದ ಮೃತಪಟ್ಟವರು. ಎಲ್ಲರೂ 18ರಿಂದ 20 ವರ್ಷದೊಳಗಿನವರು.

ಭಾನುವಾರ ರಜೆ ಇದ್ದಿದರಿಂದ ಈಜಾಡಲು ಹೋಗಿದ್ದರು. ಈಜಾಡುತ್ತಿದ್ದಾಗ ಹೂಳಿನಲ್ಲಿ ಸಿಲುಕಿ ಮೃತಪಟ್ಟಿದ್ದಾರೆ ಎಂದು ತುರುವೇಕೆರೆ ನಗರ ಠಾಣೆ ಪೊಲೀಸರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.