ತಿಪಟೂರು: ಲಾಕ್ಡೌನ್ ನಡುವೆಯೂ ಕೆಲಸ ಮಾಡುತ್ತಿರುವ 123 ಪೌರಕಾರ್ಮಿಕರಿಗೆ ಬಿ.ಜೆ.ಪಿ. ಮುಖಂಡ ಲೋಕೇಶ್ವರ ಅವರು ತಲಾ ₹500 ಪ್ರೋತ್ಸಾಹಧನ ನೀಡಿದರು.
‘ಲಾಕ್ಡೌನ್ನಿಂದ ಕಾರ್ಮಿಕರು ಸಂಕಷ್ಟ ಎದುರಿಸುತ್ತಿದ್ದಾರೆ. ಇಂತಹ ಕಷ್ಟದ ಪರಿಸ್ಥಿತಿಯಲ್ಲಿ ಅವರು ಕೆಲಸ ಮಾಡುತ್ತಿರುವುದು ಶ್ಲಾಘನೀಯ. ಹಾಗಾಗಿ ₹ 65,000 ಅನ್ನು ಸಹಾಯಧನವಾಗಿ ನೀಡಿದ್ದೇನೆ ಎಂದು ಲೋಕೇಶ್ವರ ಹೇಳಿದರು.
ಕಾರ್ಯಕ್ರಮದಲ್ಲಿ ಎಪಿಎಂಸಿ ನಿರ್ದೇಶಕ ಬಸವರಾಜು, ನಗರಸಭಾ ಸದಸ್ಯ ಸೊಪ್ಪು ಗಣೇಶ್, ಎಪಿಎಂಸಿ ಮಾಜಿ ನಿರ್ದೇಶಕ ಶಿವಕುಮಾರ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.