ADVERTISEMENT

ದೇಗುಲ ಬದಲು ಗ್ರಂಥಾಲಯ ನಿರ್ಮಿಸಿ: ಪ್ರತಾಪ್ ಮದಕರಿ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2020, 3:08 IST
Last Updated 3 ನವೆಂಬರ್ 2020, 3:08 IST
ತುಮಕೂರು ತಾಲ್ಲೂಕು ಗೂಳೂರು ಹೋಬಳಿ ನಾಯಕನಪಾಳ್ಯ ಗ್ರಾಮದಲ್ಲಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು. ಪ್ರತಾಪ್ ಮದಕರಿ, ಲಕ್ಷ್ಮಿನಾರಾಯಣ್, ಜಯಣ್ಣ ಇದ್ದಾರೆ
ತುಮಕೂರು ತಾಲ್ಲೂಕು ಗೂಳೂರು ಹೋಬಳಿ ನಾಯಕನಪಾಳ್ಯ ಗ್ರಾಮದಲ್ಲಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು. ಪ್ರತಾಪ್ ಮದಕರಿ, ಲಕ್ಷ್ಮಿನಾರಾಯಣ್, ಜಯಣ್ಣ ಇದ್ದಾರೆ   

ತುಮಕೂರು: ದೇವಾಲಯ ನಿರ್ಮಿಸಿ ಸಾಲಮಾಡಿ ಪರಿಷೆ, ಉತ್ಸವ ಮಾಡುವ ಬದಲು ಗ್ರಂಥಾಲಯಗಳನ್ನು ಸ್ಥಾಪಿಸಿ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು ಎಂದು ಕರ್ನಾಟಕ ವಾಲ್ಮೀಕಿ ಸೇನೆ ರಾಜ್ಯ ಘಟಕದ ಅಧ್ಯಕ್ಷ ಪ್ರತಾಪ್ ಮದಕರಿ ಸಲಹೆ ಮಾಡಿದರು.

ತಾಲ್ಲೂಕಿನ ಗೂಳೂರು ಹೋಬಳಿ ನಾಯಕನಪಾಳ್ಯ ಗ್ರಾಮದಲ್ಲಿ ಏರ್ಪಡಿಸಿದ್ದ ಆದಿ ಕವಿ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ‘ಸಾಲಮಾಡಿ ಹಬ್ಬ ಆಚರಿಸಿ, ಸಾಲ ತೀರಿಸಲು ಇಡೀ ವರ್ಷ ದುಡಿಯಬೇಕು. ಅದರ ಬದಲು, ಮಕ್ಕಳಿಗೆ ಶಿಕ್ಷಣ ಕೊಡಿಸಿದರೆ ಭವಿಷ್ಯದಲ್ಲಿ ಸಮಾಜಕ್ಕೆ ಆಸ್ತಿಯಾಗುತ್ತಾರೆ. ಈ ನಿಟ್ಟಿನಲ್ಲಿ ನಾಯಕ ಸಮುದಾಯ ಆಲೋಚಿಸಬೇಕಾಗಿದೆ’ ಎಂದರು.

ಸಮುದಾಯದ ಮುಖಂಡ ಲಕ್ಷ್ಮಿನಾರಾಯಣ್ ‘ಶಿಕ್ಷಣದಿಂದ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಶಿಕ್ಷಣದ ಮೂಲಕ ಸಾಮಾಜಿಕ, ಆರ್ಥಿಕ, ರಾಜಕೀಯ ಸ್ಥಾನಮಾನಗಳು ಹುಡುಕಿಕೊಂಡು ಬರುತ್ತವೆ’ ಎಂದರು.

ADVERTISEMENT

ನಿವೃತ್ತ ಅಧಿಕಾರಿ ಜಯಣ್ಣ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಪಡೆದ ವಾಲ್ಮೀಕಿ ಸಮುದಾಯದ ಮಕ್ಕಳನ್ನು ಮುಖಂಡ ಮಸ್ಕಲ್ ಕೆಂಪಹನುಮಯ್ಯ ಗೌರವಿಸಿದರು. ಹರಿಕಥಾ ದಾಸರಾದ ಎನ್.ಆರ್. ಕೆಂಪರಾಜು, ಕುಪ್ಪೂರು ರಂಗಪ್ಪನಾಯಕ್ ಅವರನ್ನು ಸನ್ಮಾ ನಿಸಲಾಯಿತು. ಗಂಗರಾಜು, ರವಿಪ್ರಸಾದ್, ಲೋಕೇಶ್, ರಾಮಯ್ಯ, ಲಕ್ಷ್ಮಯ್ಯ, ಹನುಮಂತಯ್ಯ, ಶಂಕ್ರಯ್ಯ, ಶ್ರೀನಿವಾಸ್, ನಾರಾಯಣಪ್ಪ, ಲಿಂಗಣ್ಣ, ಪುಟ್ಟಸ್ವಾಮಯ್ಯ, ತಿಮ್ಮರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.