ADVERTISEMENT

ಎಡೆಯೂರು: ಭಕ್ತರ ಸಂಖ್ಯೆ ಏರಿಕೆ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2020, 2:55 IST
Last Updated 7 ಅಕ್ಟೋಬರ್ 2020, 2:55 IST
ಕುಣಿಗಲ್ ತಾಲ್ಲೂಕು ಎಡೆಯೂರು ಸಿದ್ದಲಿಂಗೇಶ್ವರ ಕ್ಷೇತ್ರದಲ್ಲಿ ಹುಂಡಿ ಹಣ ಎಣಿಕೆ ಕಾರ್ಯ ನಡೆಯಿತು. ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮಿ, ಎಸ್‌ಬಿಐ ವ್ಯವಸ್ಥಾಪಕಿ ರೇವತಿ ಇದ್ದರು
ಕುಣಿಗಲ್ ತಾಲ್ಲೂಕು ಎಡೆಯೂರು ಸಿದ್ದಲಿಂಗೇಶ್ವರ ಕ್ಷೇತ್ರದಲ್ಲಿ ಹುಂಡಿ ಹಣ ಎಣಿಕೆ ಕಾರ್ಯ ನಡೆಯಿತು. ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮಿ, ಎಸ್‌ಬಿಐ ವ್ಯವಸ್ಥಾಪಕಿ ರೇವತಿ ಇದ್ದರು   

ಕುಣಿಗಲ್:ಲಾಕ್‌ಡೌನ್ ನಿಯಮ ಸಡಲಿಕೆಯಿಂದಾಗಿ ತಾಲ್ಲೂಕಿನ ಯಡೆಯೂರು ಸಿದ್ದಲಿಂಗೇಶ್ವರ ಕ್ಷೇತ್ರಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ಹೆಚ್ಚಾಗಿದ್ದು, ದೇವಾಲಯದ ಆದಾಯ ಸಂಗ್ರಹಣೆಯಲ್ಲೂ ಏರಿಕೆಯಾಗಿದೆ.

ಲಾಕ್‌ಡೌನ್‌ನಲ್ಲಿ ಭಕ್ತರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿತ್ತು. ಅನೇಕ ದಿನ ಭಕ್ತರಿಲ್ಲದೆ ಅರ್ಚಕರು ಮಾತ್ರ ಪೂಜೆ ನೆರೆವೇರಿಸಿದ್ದರು. ‌

ಮೊದಲ ಹಂತದ ಲಾಕ್‌ಡೌನ್‌ ಸಡಿಲಿಕೆಯಾದಾಗ ಕೊರೊನಾ ಭಯದಿಂದ ನಿತ್ಯ 500ರಿಂದ 1,000 ಜನರು ಮಾತ್ರ ಭೇಟಿ ನೀಡುತ್ತಿದ್ದರು.

ADVERTISEMENT

ಆಗಸ್ಟ್‌ನಲ್ಲಿ ಲಾಕ್‌ಡೌನ್‌ ನಿಯಮಗಳಲ್ಲಿ ಮತ್ತಷ್ಟು ಸಡಿಲಿಕೆಯಾಗಿತ್ತು. ಕೋವಿಡ್‌ ಮುಂಜಾಗೃತ ಕ್ರಮಗಳನ್ನು ಅನುಸರಿಸಿ ದೇವರ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಹಾಗಾಗಿ ಭಕ್ತರ ಸಂಖ್ಯೆ 5 ಸಾವಿರದಿಂದ 6 ಸಾವಿರಕ್ಕೇರಿತು ಎಂದು ಸಮಿತಿ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮಿ ತಿಳಿಸಿದ್ದಾರೆ.

ಮಂಗಳವಾರ ನಡೆದ ಹುಂಡಿ ಹಣ ಎಣಿಕೆಯಲ್ಲಿ ಕಳೆದ 47 ದಿನಗಳಲ್ಲಿ ₹ 19.83 ಲಕ್ಷ ಸಂಗ್ರಹವಾಗಿದೆ. ಅಕ್ಟೋಬರ್ 2ರಂದು 10 ಸಾವಿರ, 4ರಂದು 6 ಸಾವಿರ ಭಕ್ತರು ಭೇಟಿ ನೀಡಿ ದರ್ಶನ ಪಡೆದಿದ್ದಾರೆ.

ಎಣಿಕೆಯಲ್ಲಿ ದೇಗುಲದ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮಿ, ವ್ಯವಸ್ಥಾಪಕ ಮಂಜುನಾಥ್, ಎಸ್‌ಬಿಐ ವ್ಯವಸ್ಥಾಪಕಿ ರೇವತಿ, ಎಂಜನಿಯರ್ ರೇಣುಕಾ ಪ್ರಸಾದ್, ಲೆಕ್ಕಿಗರಾದ ತಿಮ್ಮದಾಸಯ್ಯ, ಶರಣ್, ನಾಗರಾಜು, ಚಂದ್ರಯ್ಯ ಇದ್ದರು.

ಅಕ್ಟೋಬರ್ 2ರಂದು 10 ಸಾವಿರ, 4ರಂದು ಭಾನುವಾರ 6ಸಾವಿರ ಭಕ್ತರು ಭೇಟಿ ನೀಡಿ ದರ್ಶನ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.