ADVERTISEMENT

‘ಜೈವಿಕ ಕ್ಷಯ ಪ್ರಯೋಗಾಲಯ’ ಆರಂಭ

ಕಸ್ತೂರಿಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ

​ಪ್ರಜಾವಾಣಿ ವಾರ್ತೆ
Published 17 ಮೇ 2018, 6:49 IST
Last Updated 17 ಮೇ 2018, 6:49 IST
ಕಸ್ತೂರ್ಬಾ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಆಸ್ಪತ್ರೆಯ ಮೈಕ್ರೋಬಯಾಲಜಿ ವಿಭಾಗದ ನೂತನ ‘ಜೈವಿಕ ಕ್ಷಯ ಪ್ರಯೋಗಾಲಯ’ವನ್ನು ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿ (ಮಾಹೆ) ಯ ಸಹ ಕುಲಾಧಿಪತಿ ಡಾ. ಎಚ್ .ಎಸ್ ಬಲ್ಲಾಳ್ ಉದ್ಘಾಟಿಸಿದರು.
ಕಸ್ತೂರ್ಬಾ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಆಸ್ಪತ್ರೆಯ ಮೈಕ್ರೋಬಯಾಲಜಿ ವಿಭಾಗದ ನೂತನ ‘ಜೈವಿಕ ಕ್ಷಯ ಪ್ರಯೋಗಾಲಯ’ವನ್ನು ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿ (ಮಾಹೆ) ಯ ಸಹ ಕುಲಾಧಿಪತಿ ಡಾ. ಎಚ್ .ಎಸ್ ಬಲ್ಲಾಳ್ ಉದ್ಘಾಟಿಸಿದರು.   

ಉಡುಪಿ: ಕಸ್ತೂರಿಬಾ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಆಸ್ಪತ್ರೆಯ ಮೈಕ್ರೋಬಯಾಲಜಿ ವಿಭಾಗದ ನೂತನವಾಗಿ ನಿರ್ಮಿಸಿದ 3ನೇ ಹಂತದ ‘ಜೈವಿಕ ಕ್ಷಯ ಪ್ರಯೋಗಾಲಯ’ವನ್ನು ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿ (ಮಾಹೆ) ಯ ಸಹ ಕುಲಾಧಿಪತಿ ಡಾ. ಎಚ್ ಎಸ್ ಬಲ್ಲಾಳ್ ಬುಧವಾರ ಉದ್ಘಾಟಿಸಿದರು.

ಮೈಕ್ರೋಬಯಾಲಜಿ ವಿಭಾಗದ ಮುಖ್ಯಸ್ಥ ಡಾ. ಕಿರಣ್ ಚಾವ್ಲಾ ಮಾತನಾಡಿ, ಕಸ್ತೂರಿಬಾ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಮೈಕ್ರೋಬಯಾಲಜಿ ವಿಭಾಗದ ಸೇವೆಗಳನ್ನು ನವೀಕರಿಸುವ ಮತ್ತು ಬಲಪಡಿಸುವ ಸಲುವಾಗಿ ಮತ್ತೊಂದು ಹೆಜ್ಜೆಯನ್ನು ಇಟ್ಟಿದೆ. ಮೈಕ್ರೋಬ್ಯಾಕ್ಟೀರಿಯಲ್ ಪ್ರಯೋಗಾಲಯದ ಸಿಬ್ಬಂದಿಗಳಿಗೆ ಸುರಕ್ಷಿತ ಮತ್ತು ಸೋಂಕು ಮುಕ್ತ ಪರಿಸರವನ್ನು ಒದಗಿಸಲು ರಾಷ್ಟ್ರೀಯ ಕ್ಷಯರೋಗ ಕಾರ್ಯಕ್ರಮದ ನಿಯಮಗಳ ಪ್ರಕಾರ ಈ ಪರಿಷ್ಕೃತ ಬಿಎಸ್ಎಲ್ 3ನೇ ಪ್ರಯೋಗಾಲಯದ ಸ್ಥಾಪಿಸಲಾಗಿದೆ. ಇಂತಹ ಸೌಕರ್ಯವನ್ನು ಹೊಂದಿದ ರಾಜ್ಯದ ಮೊದಲ ಖಾಸಗಿ ವೈದ್ಯಕೀಯ ಮಹಾವಿದ್ಯಾಲಯವಾಗಿದೆ ಎಂದರು.

ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿ (ಮಾಹೆ) ಸಹ ಕುಲಪತಿ ಡಾ. ಎಚ್. ವಿನೋದ್ ಭಟ್, ಡಾ. ಪೂರ್ಣಿಮಾ ಬಾಳಿಗಾ, ಕಸ್ತೂರ್ಬಾ ವೈದ್ಯಕೀಯ ಕಾಲೆಜಿನ ಡೀನ್ ಡಾ. ಪ್ರಜ್ಞಾ ರಾವ್, ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ ಶೆಟ್ಟಿ, ಆಸ್ಪತ್ರೆಯ ಮುಖ್ಯ ನಿರ್ವಹಣಾಧಿಕಾರಿ ಸಿ.ಜಿ ಮುತ್ತಣ್ಣ , ಜಿಲ್ಲೆಯ ಕ್ಷಯ ರೋಗ ಅಧಿಕಾರಿ ಚಿದಾನಂದ ಸಂಜು ಉಪಸ್ಥಿತರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.