ADVERTISEMENT

ಪರವಾನಗಿ ಹಾಜರು ಪಡಿಸಲು ಸೂಚನೆ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2012, 10:28 IST
Last Updated 20 ಡಿಸೆಂಬರ್ 2012, 10:28 IST

ಉಡುಪಿ: ಕಾರ್ಕಳ ಬಸ್ ನಿಲ್ದಾಣದ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕಾರ್ಕಳ ನಗರಕ್ಕೆ ಬರುವ ಎಲ್ಲಾ ಬಸ್‌ಗಳ ಪರವಾನಗಿ ಹಾಗೂ ವೇಳಾಪಟ್ಟಿ ಪ್ರತಿಗಳನ್ನು ಉಡುಪಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಕಾರ್ಯದರ್ಶಿಗೆ ಸಲ್ಲಿಸುವಂತೆ ಸೂಚಿಸಲಾಗಿದೆ.

ಕಾರ್ಕಳ ನಗರಕ್ಕೆ ವಿವಿಧ ಪ್ರಾಧಿಕಾರದಿಂದ ನೀಡಿದ ಮೂಲ ಪರವಾನಗಿ ಹಾಗೂ ವೇಳಾಪಟ್ಟಿಯ 1 ಛಾಯಾಪ್ರತಿ ಜತೆ  ಮಣಿಪಾಲದಲ್ಲಿನ ಜಿಲ್ಲಾ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಕಾರ್ಯದರ್ಶಿಗೆ  ಇದೇ 20ರಂದು ಬೆಳಿಗ್ಗೆ 11ಗಂಟೆಗೆ ತಪ್ಪದೆ ಹಾಜರುಪಡಿಸುವಂತೆ ಪ್ರದೇಶಿಕ ಸಾರಿಗೆ ಅಧಿಕಾರಿಗಳು  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.