ADVERTISEMENT

6 ವಿದ್ಯಾರ್ಥಿಗಳು, ಚಾಲಕನಿಗೆ ಗಂಭೀರ ಗಾಯ

ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಆಟೊಗೆ ಕಾರು ಡಿಕ್ಕಿ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2019, 15:24 IST
Last Updated 15 ಮಾರ್ಚ್ 2019, 15:24 IST
ಅಪಘಾತದಲ್ಲಿ ನಜ್ಜುಗೊಂಡಿರುವ ಆಟೊ
ಅಪಘಾತದಲ್ಲಿ ನಜ್ಜುಗೊಂಡಿರುವ ಆಟೊ   

ಉಡುಪಿ: ತಾಲ್ಲೂಕಿನ ಸಂತೇಕಟ್ಟೆ ಬಳಿ ಗುರುವಾರ ಬೆಳಿಗ್ಗೆ ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಆಟೋಗೆ ಕಾರೊಂದು ಡಿಕ್ಕಿಹೊಡೆದು 6 ವಿದ್ಯಾರ್ಥಿಗಳಿಗೆ ಗಾಯಗಳಾಗಿವೆ.

ಗಾಯಗೊಂಡ ಪವಿತ್ರ, ಶ್ರೇಯಾ, ಪ್ರಜ್ಞಾ, ಶ್ರವ್ಯಾ, ರಕ್ಷಣ್, ಪ್ರೇಕ್ಷಣ್ ಎಂಬ ವಿದ್ಯಾರ್ಥಿಗಳಿಗೆ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಕಾರು ಆಟೋಗೆ ಡಿಕ್ಕಿಹೊಡೆದ ರಭಸಕ್ಕೆ ಆಟೊ ನಜ್ಜುಗುಜ್ಜಾಗಿದ್ದು, ರಿಕ್ಷಾ ಚಾಲಕ ದಿವಾಕರ ಪಾಲನ್ ಅವರ ಕುತ್ತಿಗೆ ಕೆಳಗಿನ ಮೂಳೆ ಮುರಿದಿದೆ.

ಕಾರು ಚಾಲಕನ ಅಜಾಗರೂಕತೆಯಿಂದ ಅಪಘಾತ ಸಂಭವಿಸಿದ್ದು, ಜಾರ್ಜ್‌ ಡಿಸೋಜ ಎಂಬುವರ ವಿರುದ್ಧ ಉಡುಪಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕಆಸ್ಪತ್ರೆಗೆ ಭೇಟಿನೀಡಿ ಮಕ್ಕಳ ಆರೋಗ್ಯ ವಿಚಾರಿಸಿದರು. ಪೋಷಕರೊಂದಿಗೆ ಚರ್ಚಿಸಿ ಘಟನೆಯ ಬಗ್ಗೆ ಪೊಲೀಸರಿಂದ ಮಾಹಿತಿ ಪಡೆದರು.ಶಾಲಾ ಮಕ್ಕಳ ವಾಹನಗಳ ಬಗ್ಗೆ ಮುತುವರ್ಜಿ ವಹಿಸುವಂತೆ ಹಾಗೂ ಇಂತಹ ಘಟನೆಗಳು ಮರುಕಳಿಸದಂತೆ ಮುಂಜಾಗ್ರತೆ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.