ADVERTISEMENT

ಉಡುಪಿ: ಯುವತಿಯನ್ನು ಕೊಂದಿದ್ದ ಯುವಕನೂ ಸಾವು

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2021, 18:53 IST
Last Updated 31 ಆಗಸ್ಟ್ 2021, 18:53 IST
ಸಂದೇಶ್ ಕುಲಾಲ್
ಸಂದೇಶ್ ಕುಲಾಲ್   

ಉಡುಪಿ: ಸಂತೆಕಟ್ಟೆ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಯುವತಿಗೆ ಚೂರಿ ಇರಿದು, ತಾನೂ ಕುತ್ತಿಗೆ ಕುಯ್ದುಕೊಂಡಿದ್ದ ಯುವಕ ಮಂಗಳವಾರ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ.

ಅಲೆವೂರಿನ ಸಂದೇಶ್‌ ಕುಲಾಲ್‌ (28) ಮೃತ ಯುವಕ. ಪ್ರೇಮವೈಫಲ್ಯದಿಂದ ತೀವ್ರ ಮನನೊಂದಿದ್ದ ಸಂದೇಶ್‌ ಸೋಮವಾರ ಸಂಜೆ ಬೈಕ್‌ನಲ್ಲಿ ಹೋಗುತ್ತಿದ್ದ ಸೌಮ್ಯಶ್ರೀ ವಿಠಲ ಭಂಡಾರಿ ಅವರನ್ನು ಅಡ್ಡಗಟ್ಟಿ ಮನಬಂದಂತೆ ಚಾಕುವಿನಿಂದ ಇರಿದಿದ್ದ. ಬಳಿಕ ತಾನೂ ಇರಿದುಕೊಂಡಿದ್ದ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಇಬ್ಬರನ್ನೂ ಸ್ಥಳೀಯರು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಿದ್ದರು.‌

ಚಿಕಿತ್ಸೆಗೆ ಸ್ಪಂದಿಸದೆ ಸೋಮವಾರ ಸೌಮ್ಯಶ್ರೀ ಮೃತಪಟ್ಟಿದ್ದರು. ಮಂಗಳವಾರ ಸಂದೇಶ್ ಕೂಡ ಮೃತಪಟ್ಟಿದ್ದು, ಬದುಕಿ ಬಾಳಬೇಕಾದ ಎರಡು ಜೀವಗಳು ದುರಂತ ಅಂತ್ಯಕಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.