ಪಡುಬಿದ್ರಿ: ಎಸ್ಡಿಪಿಐ ಪಡುಬಿದ್ರಿ ಗ್ರಾಮ ಸಮಿತಿಯ ವತಿಯಿಂದ ಇ–ಶ್ರಮ್ ಕಾರ್ಡ್, ಆಧಾರ್ ಕಾರ್ಡ್ ಮತ್ತು ಮತದಾರರ ಗುರುತಿನ ಚೀಟಿ ಅಭಿಯಾನ ಪಡುಬಿದ್ರಿಯ ದೀನ್ ಸ್ಟ್ರೀಟ್ನಲ್ಲಿ ನಡೆಯಿತು.
ಎಸ್ಡಿಪಿಐ ಉಡುಪಿ ಜಿಲ್ಲಾ ಉಪಾಧ್ಯಕ್ಷ ಶಹಿದ್ ಆಲಿ ಉದ್ಘಾ ಟಿಸಿ ಪಡುಬಿದ್ರಿಯನ್ನು ಮಾದರಿ ಗ್ರಾಮ ವನ್ನಾಗಿ ಮಾಡಲು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.
ಗ್ರಾಮ ಸಮಿತಿಯ ಅಧ್ಯಕ್ಷ ಇಬ್ರಾಹಿಂ ಕಂಚಿನಡ್ಕ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಖಲೀಲ್ ಅಹ್ಮದ್, ಎಸ್ಡಿಪಿಐ ಕಾಪು ಕ್ಷೇತ್ರ ಸಮಿತಿಯ ಅಧ್ಯಕ್ಷ ಹನೀಫ್ ಮೂಳೂರು, ಪಡುಬಿದ್ರಿಯ ಹಿರಿಯ ಮುಂದಾಳು ಶಬ್ಬೀರ್ ಸಾಹೇಬ್, ಗ್ರಾಮ ಪಂಚಾಯಿತಿ ಸದಸ್ಯ ಫಿರೋಝ್ ಹಾಗೂ ಅಬ್ದುಲ್ ಅಝೀಝ್, ಎಸ್ಡಿಪಿಐ ಗ್ರಾಮ ಸಮಿತಿಯ ಉಪಾಧ್ಯಕ್ಷ ನಝೀಬ್, ಸದಸ್ಯರಾದ ಅನ್ಸಾರ್ ಮತ್ತು ಝಹೀರ್,ಮುಖಂಡರಾದ ಬುಡಾನ್ ಸಾಹೇಬ್, ಅನ್ವರ್ ಖಾನ್, ಎ.ಎಚ್.ಖಾದರ್, ಹಾಜಿ ಅಬ್ದುಲ್ ರೆಹಮಾನ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.