ಹೆಬ್ರಿ: ಶಿವಪುರ ಕೆರೆಬೆಟ್ಟು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಣಾ ಕಾರ್ಯಕ್ರಮ ಈಚೆಗೆ ನಡೆಯಿತು.
ಭೂತುಗುಂಡಿ ಚಂದ್ರಶೇಖರ ಹೆಗ್ಡೆ ಮತ್ತು ಎಳಗೋಳಿ ಕೃಷ್ಣಮ್ಮ ಶೆಟ್ಟಿ ಅವರ ಸ್ಮರಣಾರ್ಥ ಪುತ್ರ ಪ್ರಸನ್ನ ಚಂದ್ರಶೇಖರ ಶೆಟ್ಟಿ ಅವರು, ನೋಟ್ ಪುಸ್ತಕಗಳನ್ನು ವಿತರಿಸಿ ಮಕ್ಕಳಿಗೆ ಶುಭ ಹಾರೈಸಿದರು.
ದಾನಿ ಪ್ರಸನ್ನ ಶೆಟ್ಟಿ ಯಳಗೋಳಿ ಅವರನ್ನು ಗೌರವಿಸಲಾಯಿತು. ವಕೀಲ ಸುಮಿತ್ ಶೆಟ್ಟಿ, ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷ ವಿಠಲ ಸೇರಿಗಾರ್, ಹಿರಿಯ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಉದಯ ಸೇರಿಗಾರ್, ರವಿ ಶೆಟ್ಟಿ ಪಡುಕುಡೂರು, ಶಾಲಾ ಮುಖ್ಯ ಶಿಕ್ಷಕಿ ವಿನಂತಿನಿ ಆಚಾರ್ಯ, ಶಿಕ್ಷಕಿಯರಾದ ಸುಗುಣ, ಶಶಿಕಲಾ ಇದ್ದರು.
ಮುಖ್ಯ ಶಿಕ್ಷಕಿ ವಿನಂತಿನಿ ಆಚಾರ್ಯ ಸ್ವಾಗತಿಸಿದರು. ಸಹ ಶಿಕ್ಷಕ ರಕ್ಷಿತ್ ನಾಯ್ಕ್ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.