ADVERTISEMENT

ಯಕ್ಷಗಾನ ವಸತಿ ಶಾಲೆಗೆ ಅರ್ಜಿ ಆಹ್ವಾನ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2022, 4:02 IST
Last Updated 8 ಡಿಸೆಂಬರ್ 2022, 4:02 IST
ಶಾಸಕ ಕೆ.ರಘುಪತಿ ಭಟ್ ನೇತೃತ್ವದ ನಿಯೋಗದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿತು
ಶಾಸಕ ಕೆ.ರಘುಪತಿ ಭಟ್ ನೇತೃತ್ವದ ನಿಯೋಗದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿತು   

ಬ್ರಹ್ಮಾವರ: ಯಕ್ಷಗಾನ ಚಿಂತಕ ದಿ.ಐರೋಡಿ ಸದಾನಂದ ಹೆಬ್ಬಾರರು ಸ್ಥಾಪಿಸಿದ, ಹಂಗಾರಕಟ್ಟೆಯ ಯಕ್ಷಗಾನ ಕಲಾಕೇಂದ್ರವು ಭಾಗವತಿಗೆ, ಮದ್ದಲೆ, ನೃತ್ಯ, ಚಂಡೆ ತರಬೇತಿ ಪ್ರಾರಂಭಿಸಲಿದೆ.

ಉಚಿತ ಊಟ, ಉಪಾಹಾರ, ವಸತಿ ಸೌಲಭ್ಯವಿದ್ದು ಉತ್ತೀರ್ಣರಾದವರಿಗೆ ಆಯ್ದ ಮೇಳಗಳಲ್ಲಿ ಉದ್ಯೋಗದ ವ್ಯವಸ್ಥೆ ಮಾಡಲಾಗುವುದು. ಗುರುಕುಲ ಪದ್ದತಿಯಂತೆ ನಡೆಸಲುದ್ದೇಶಿಸುವ ಯಕ್ಷಗಾನದ ಶಿಕ್ಷಣಕ್ಕಾಗಿ ಸೇರಬಯಸುವವರು ಈ ತಿಂಗಳ 20ರ ಒಳಗೆ ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ ಅಂಚೆ ಐರೋಡಿ 576226, ಉಡುಪಿ ಜಿಲ್ಲೆ ಇಲ್ಲಿಗೆ ಅರ್ಜಿ ಸಲ್ಲಿಸಬಹುದು. ಉಡುಪಿ ಜಿಲ್ಲೆಯ ಸಾಲಿಗ್ರಾಮದ ಗುಂಡ್ಮಿ
ಯಲ್ಲಿರುವ ಯಕ್ಷಗಾನ ಕಲಾಕೇಂದ್ರದ ಸದಾನಂದ ರಂಗಮಂಟಪಕ್ಕೆ ನೇರವಾಗಿ ಬಂದು ಅರ್ಜಿ ಕೊಡಬಹುದು. ಮಾಹಿತಿಗೆ 9880605610 ಸಂಪರ್ಕಿಸಬಹುದು ಎಂದು ಕಲಾಕೇಂದ್ರದ ಕಾರ್ಯದರ್ಶಿ ಐರೋಡಿ ರಾಜಶೇಖರ ಹೆಬ್ಬಾರ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT