ADVERTISEMENT

ಕೆಥೊಲಿಕ್ ಕ್ರೆಡಿಟ್ ಕೊ ಅಪರೇಟಿವ್ ಸೊಸೈಟಿ ರಜತ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2022, 5:03 IST
Last Updated 3 ಸೆಪ್ಟೆಂಬರ್ 2022, 5:03 IST
ಬ್ರಹ್ಮಾವರದ ಕೆಥೊಲಿಕ್ ಕ್ರೆಡಿಟ್ ಕೊ ಆಪರೇಟಿವ್ ಸೊಸೈಟಿಯ ರಜತ ಮಹೋತ್ಸವ ಕಾರ್ಯಕ್ರಮವನ್ನು ಉಡುಪಿ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಡಾ.ಜೆರಾಲ್ಡ್ ಐಜಾಕ್ ಲೋಬೊ ಉದ್ಘಾಟಿಸಿದರು
ಬ್ರಹ್ಮಾವರದ ಕೆಥೊಲಿಕ್ ಕ್ರೆಡಿಟ್ ಕೊ ಆಪರೇಟಿವ್ ಸೊಸೈಟಿಯ ರಜತ ಮಹೋತ್ಸವ ಕಾರ್ಯಕ್ರಮವನ್ನು ಉಡುಪಿ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಡಾ.ಜೆರಾಲ್ಡ್ ಐಜಾಕ್ ಲೋಬೊ ಉದ್ಘಾಟಿಸಿದರು   

ಬ್ರಹ್ಮಾವರ: ತಾಲ್ಲೂಕಿನ ಕೆಥೊಲಿಕ್ ಕ್ರೆಡಿಟ್ ಕೊ ಆಪರೇಟಿವ್ ಸೊಸೈಟಿಯ ರಜತ ಮಹೋತ್ಸವ ಕಾರ್ಯಕ್ರಮ ಅಧ್ಯಕ್ಷ ವಲೇರಿಯನ್ ಮಿನೇಜಸ್ ಅಧ್ಯಕ್ಷತೆಯಲ್ಲಿ ಈಚೆಗೆ ನಡೆಯಿತು.

ಉಡುಪಿ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಡಾ.ಜೆರಾಲ್ಡ್ ಐಜಾಕ್ ಲೋಬೊ ಉದ್ಘಾಟಿಸಿದರು.

ಎಸ್.ಎಂ.ಎಸ್. ಚರ್ಚಿನ ವಿಕಾರ್ ಜನರಲ್ ಫಾ.ಎಂ.ಸಿ ಮಥಾಯ್, ಸಹಕಾರ ತಜ್ಞ ಚಿತ್ತರಂಜನ್ ಬೋಳಾರ್, ಅರುಣ್ ಕುಮಾರ್, ಶ್ರೀಧರ್ ಸೋಮಯಾಜಿ ಇದ್ದರು.

ADVERTISEMENT

25 ವರ್ಷಗಳಿಂದ ಅಧ್ಯಕ್ಷರಾಗಿರುವ ವಲೇರಿಯನ್ ಮಿನೇಜಸ್‌, ನಿರ್ದೇಶಕರಾಗಿರುವ ಉಪಾಧ್ಯಕ್ಷ ಗಿಲ್ಬರ್ಟ್ ರಾಡ್ರಿಗಸ್, ಜೆರಾಲ್ಡ್ ಎಂ.ಗೊನ್ಸಾಲ್ವಿಸ್, ಜೋಸ್ಫಿನ್ ಲುವಿಸ್, ಜಸಿಂತಾ ಎ.ಎಂ.ಸೆರಾವೊ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂಜಯ್ ಫೆರ್ನಾಂಡಿಸ್, ಸಿಬ್ಬಂದಿ ಟ್ರೇಸಿ ಒಲಿವರ್‌, ಚೇತನ್ ಮಿನೇಜಸ್ ಅವರನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.