ADVERTISEMENT

ಕಾಲೇಜು ವಾರ್ಷಿಕೋತ್ಸವ, ಪ್ರತಿಭಾ ಪುರಸ್ಕಾರ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2022, 4:16 IST
Last Updated 28 ಆಗಸ್ಟ್ 2022, 4:16 IST
ವಾರ್ಷಿಕೋತ್ಸವ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಮೆಸ್ಕಾಂ ನಿರ್ದೇಶಕರಾದ ಉದ್ಯಮಿ ಮುನಿಯಾಲು ದಿನೇಶ ಪೈ ಉದ್ಘಾಟಿಸಿದರು
ವಾರ್ಷಿಕೋತ್ಸವ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಮೆಸ್ಕಾಂ ನಿರ್ದೇಶಕರಾದ ಉದ್ಯಮಿ ಮುನಿಯಾಲು ದಿನೇಶ ಪೈ ಉದ್ಘಾಟಿಸಿದರು   

ಹೆಬ್ರಿ: ಮುನಿಯಾಲು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕೋತ್ಸವ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಶನಿವಾರ ಮುನಿಯಾಲಿನಲ್ಲಿ ನಡೆಯಿತು.

ವಾರ್ಷಿಕೋತ್ಸವ ಉದ್ಘಾಟಿಸಿದ ಮೆಸ್ಕಾಂ ನಿರ್ದೇಶಕ ಮುನಿಯಾಲು ದಿನೇಶ ಪೈ ‘ಎಲ್ಲಾ ರಂಗದಲ್ಲೂ ಮುಂದಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬೆಳವಣಿಗೆಗೆ ಅವಕಾಶವಿದ್ದು ಸ್ಥಳೀಯರು ಇದನ್ನು ಬೆಳೆಸಬೇಕು. ಕಾಲೇಜು ಉತ್ತಮ ಉಪನ್ಯಾಸಕ ವೃಂದ ಹೊಂದಿ
ರುವುದು ಸಂತೋಷದ ವಿಷಯ. ಈಗಿನ ವಿದ್ಯಾರ್ಥಿಗಳಿಗೆ ಕಲಿಕೆಗೆ ಪೂರಕವಾದ ವ್ಯವಸ್ಥೆಯನ್ನು ಸರ್ಕಾರ, ದಾನಿಗಳು, ಹೆತ್ತವರು ಅವಕಾಶ ಮಾಡಿಕೊಟ್ಟಿದ್ದಾರೆ. ಇದನ್ನು ವಿದ್ಯಾರ್ಥಿಗಳು ಅರಿತುಕೊಂಡು ವಿದ್ಯಾಭ್ಯಾಸದಲ್ಲಿ ತೊಡಗಿಕೊಳ್ಳಬೇಕು’ ಎಂದರು.

ನಿವೃತ್ತ ಪ್ರಾಂಶುಪಾಲ ಶ್ರೀವರ್ಮ ಅಜ್ರಿ ಮಾತನಾಡಿದರು.

ADVERTISEMENT

ಪ್ರಾಂಶುಪಾಲ ಧರ್ಮಣ್ಣ ಎಚ್.ಡಿ‌. ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉಷಾ ಹೆಬ್ಬಾರ್, ಜಿಲ್ಲಾ ಪಂಚಾಯಿತಿ ಸದಸ್ಯೆ ಜ್ಯೋತಿ ಹರೀಶ್, ಲಕ್ಷ್ಮೀವೆಂಕಟರಮಣ ದೇವಸ್ಥಾನದ ಮುಖ್ಯಸ್ಥ ಶ್ರೀಧರ್ ಪೈ, ವಿದ್ಯಾರ್ಥಿ ಕ್ಷೇಮಪಾಲಧಿಕಾರಿ‌ ವಿಶ್ವೇಶ್ವರ ಗಾಂವಕರ್ ಇದ್ದರು.

ಪ್ರಾಧ್ಯಾಪಕ ಕೋಕಿಲ್ ಎಚ್.ಎಸ್. ನಿರೂಪಿಸಿ, ಮಂಜುನಾಥ್ ಆಚಾರ್ಯ ಸ್ವಾಗತಿಸಿ ಉಮೇಶ ಬಿ. ಎಮ್. ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.