ADVERTISEMENT

ಹೆಬ್ರಿ, ಕೆರ್ವಾಸೆಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತರ ಸಭೆ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2022, 5:02 IST
Last Updated 24 ಸೆಪ್ಟೆಂಬರ್ 2022, 5:02 IST
ಹೆಬ್ರಿ ಕಾಂಗ್ರೆಸ್ ಸಮಿತಿಯ ಸಭೆಯಲ್ಲಿ ಹೆಬ್ರಿ ಬ್ಲಾಕ್ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ಮಾತನಾಡಿದರು
ಹೆಬ್ರಿ ಕಾಂಗ್ರೆಸ್ ಸಮಿತಿಯ ಸಭೆಯಲ್ಲಿ ಹೆಬ್ರಿ ಬ್ಲಾಕ್ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ಮಾತನಾಡಿದರು   

ಹೆಬ್ರಿ: ಕಾಂಗ್ರೆಸ್ ಹೆಬ್ರಿ ಸಮಿತಿಯ ಸಭೆ ಚೈತನ್ಯ ಒಳಾಂಗಣ ಕ್ರೀಡಾಂಗಣದಲ್ಲಿ ಅಧ್ಯಕ್ಷ ಎಚ್.ಬಿ.ಸುರೇಶ್‌ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ಹೆಬ್ರಿ ಬ್ಲಾಕ್ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ಮಾತನಾಡಿ ನೂತನ ಬೂತ್ ಮತ್ತು ಗ್ರಾಮೀಣ ಸಮಿತಿ ರಚಿಸುವುದಾಗಿ ಹೇಳಿದರು. ಕೆಪಿಸಿಸಿ ಸದಸ್ಯ ನೀರೆ ಕೃಷ್ಣ ಶೆಟ್ಟಿ ಮಾತನಾಡಿ ಸಮಿತಿ ರಚಿಸುವಾಗ ಯುವಕರು, ಮಹಿಳೆಯರು ಹಾಗೂ ಸಕ್ರಿಯವಾಗಿ ದುಡಿಯುವವರಿಗೆ ಆದ್ಯತೆ ಮೇಲೆ ಅವಕಾಶ ನೀಡಬೇಕು ಎಂದರು.

ಪ್ರಧಾನ ಕಾರ್ಯದರ್ಶಿ ಎಚ್. ಜನಾರ್ದನ್, ಶಂಕರ್ ಶೇರಿಗಾರ್, ಯೂತ್ ಅಧ್ಯಕ್ಷ ದಿನೇಶ್ ಶೆಟ್ಟಿ, ಕರುಣಾಕರ ಸೇರಿಗಾರ್, ಸುರೇಶ್ ಶೆಟ್ಟಿ, ಸತೀಶ್ಚಂದ್ರ ಶೆಟ್ಟಿ ಭಾಗವಹಿಸಿದ್ದರು. ಐಟಿ ಸೆಲ್ ಅಧ್ಯಕ್ಷ ಸಂತೋಷ್ ನಾಯಕ್ ಕನ್ಯಾನ ಸ್ವಾಗತಿಸಿ ವಂದಿಸಿದರು.

ADVERTISEMENT

ಕೆರ್ವಾಸೆ: ಕೆರ್ವಾಸೆ ಕಾಂಗ್ರೆಸ್ ಸಮಿತಿ ಸಭೆ ಅಧ್ಯಕ್ಷ ಡಯಾಸ್ ಚೆರಿಯನ್‌ ಅಧ್ಯಕ್ಷತೆಯಲ್ಲಿ ನಡೆಯಿತು. ಮಂಜುನಾಥ ಪೂಜಾರಿ, ನೀರೆ ಕೃಷ್ಣ ಶೆಟ್ಟಿ, ಜಿಲ್ಲಾ ಕೃಷಿ ಘಟಕದ ಕಾರ್ಯಧ್ಯಕ್ಷ ಕೆರ್ವಾಸೆ ಪ್ರಕಾಶ ಪೂಜಾರಿ, ಜಿಲ್ಲಾ ಕಾರ್ಮಿಕ ಘಟಕದ ಅಧ್ಯಕ್ಷ ಗಣೇಶ ಪೂಜಾರಿ, ಕೆರ್ವಾಸೆ ಯುವ ಅಧ್ಯಕ್ಷ ಪ್ರಶಾಂತ್ ಆಚಾರ್ಯ, ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ವಿದ್ಯಾಶ್ರೀ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.