ಉಡುಪಿ: ಮಣಿಪಾಲ ಠಾಣೆಯ ವ್ಯಾಪ್ತಿಯ ಕುಕ್ಕಿಕಟ್ಟೆ ಹಾಗೂ ಅಲೆವೂರಿನ ಗುಡ್ಡೆಯಂಗಡಿ ಬಳಿ ಶನಿವಾರ ಎರಡು ಸರಳಿ ಸುಲಿಗೆ ಪ್ರಕರಣ ನಡೆದಿದ್ದು, ಬೆದರಿಸಿ ಹಣ, ಮೊಬೈಲ್ ದೋಚಲಾಗಿದೆ.
ನಿತೀಶ್ ದೇವಾಡಿಗ ಎಂಬುವರು ಶನಿವಾರ ಬೆಳಗಿನ ಜಾವ ಮೀನು ವ್ಯಾಪಾರಕ್ಕೆ ಹೋಗುವಾಗ ಅಡ್ಡಗಟ್ಟಿದ ಕಿಡಿಗೇಡಿಗಳು ಚಾಕು ತೋರಿಸಿ ಮೀನು ವ್ಯಾಪಾರಕ್ಕೆ ಇಟ್ಟುಕೊಂಡಿದ್ದ ₹ 19,140 ನಗದು ದೋಚಿ ಪರಾರಿಯಾಗಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಯತೀಂದ್ರ ಆನಂದ ಗಾಣಿಗ ಎಂಬುವರು ಮಣಿಪಾಲದ ಎಂಟಿಎನ್ಎಲ್ ಕಂಪೆನಿಯಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ಹೋಗುವಾಗ ಗುಡ್ಡೆಯಂಗಡಿ ಗಣೇಶ್ ಕ್ಲಿನಿಕ್ ಮುಂಭಾಗ ಎದುರಾದ ದುಷ್ಕರ್ಮಿಗಳು ಹಲ್ಲೆ ನಡೆಸಿ, ಸ್ಕೂಡ್ರೈವರ್ನಿಂದ ತಿವಿದು ಗಾಯಗೊಳಿಸಿದ್ದಾರೆ. ಬಳಿಕ ಮೊಬೈಲ್ ಹಾಗೂ ಬ್ಯಾಗ್ ದೋಚಿಕೊಂಡು ಹೋಗಿದ್ದಾರೆ.
ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.