ADVERTISEMENT

ಮಹಮ್ಮದ್ ಸುಭಾನ್ ಗಡಿಪಾರು

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2022, 2:30 IST
Last Updated 19 ಅಕ್ಟೋಬರ್ 2022, 2:30 IST
ಮಹಮ್ಮದ್ ಸುಭಾನ್
ಮಹಮ್ಮದ್ ಸುಭಾನ್   

ಉಡುಪಿ: ಸಾರ್ವಜನಿಕ ಸ್ಥಳಗಳಲ್ಲಿ ಹೊಡೆದಾಟ, ದನ ಕಳವು, ಅಕ್ರಮ ಜಾನುವಾರು ಸಾಗಾಟ ಹಾಗೂ ಹಿಂಸಾತ್ಮಕ ಕೃತ್ಯಗಳಲ್ಲಿ ಭಾಗಿಯಾಗಿ ಸಮಾಜದ ಶಾಂತಿ ಸುವ್ಯವಸ್ಥೆಗೆ ಭಂಗ ತಂದ ಆರೋಪಿ ಮಹಮ್ಮದ್ ಸುಭಾನ್ ಎಂಬಾತನನ್ನು 6 ತಿಂಗಳು ಚಳ್ಳಕೆರೆ ಉಪ ವಿಭಾಗಕ್ಕೆ ಗಡಿ ಪಾರು ಮಾಡಲಾಗಿದೆ.

ಮಹಮ್ಮದ್ ಸುಭಾನ್‌ ವಿರುದ್ಧ ಗಂಗೊಳ್ಳಿ ಠಾಣೆಯಲ್ಲಿ 5 ಪ್ರಕರಣಗಳು ದಾಖಲಾಗಿದ್ದು, ಜೈಲು ಶಿಕ್ಷೆ ಅನುಭವಿಸಿದ್ದಾನೆ. ಹಲವು ಪ್ರಕರಣಗಳಲ್ಲಿ ಜಾಮೀನು ಪಡೆದು ಹೊರಬಂದ ಬಳಿಕವೂ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಶಾಂತಿ ಸುವ್ಯವಸ್ಥೆಗೆ ಭಂಗ ತಂದಿದ್ದ.

ಗಂಗೊಳ್ಳಿ ಪಿಎಸ್‌ಐ ನೀಡಿದ ವರದಿ ಆಧರಿಸಿ ಕುಂದಾಪುರ ಉಪ ವಿಭಾಗದ ದಂಡಾಧಿಕಾರಿ ಮಹಮ್ಮದ್ ಸುಭಾನ್‌ಗೆ ಗಡಿ ಪಾರು ಮಾಡಿದ್ದಾರೆ. ಸಂಬಂಧಪಟ್ಟ ಪ್ರಾಧಿಕಾರದ ಅನುಮತಿ ಪಡೆಯದೆ ಕುಂದಾಪುರ ಉಪ ವಿಭಾಗದಲ್ಲಿ ಆರೋಪಿಯು ಕಾಣಿಸಿಕೊಂಡರೆ ಬಂಧಿಸುವಂತೆ ಆದೇಶಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.