ADVERTISEMENT

ದೇವಳ ಅಭಿವೃದ್ಧಿ ಗ್ರಾಮ ಸುಧಾರಣೆ: ಸಚಿವ ಕೋಟ ಶ್ರೀನಿವಾಸ ಪೂಜಾರಿ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2021, 11:51 IST
Last Updated 16 ಅಕ್ಟೋಬರ್ 2021, 11:51 IST
ಕೋಟತಟ್ಟು ಹಂದೆ ವಿಷ್ಣುಮೂರ್ತಿ ಮಹಾಗಣಪತಿ ದೇವಳದ ರಥ ಕೊಠಡಿ, ರಂಗಮಂಟಪಕ್ಕೆ ಶುಕ್ರವಾರ ಸಚಿವ ಶ್ರೀನಿವಾಸ ಪೂಜಾರಿ ಭೂಮಿಪೂಜೆ ನೆರವೇರಿಸಿದರು. ಅಶ್ವಿನಿ ದಿನೇಶ್, ಅಮರ್ ಹಂದೆ, ಯಶೋಧ ಹಂದೆ, ವೆಂಕಟರಮಣ ಸೋಮಯಾಜಿ ಇದ್ದರು.
ಕೋಟತಟ್ಟು ಹಂದೆ ವಿಷ್ಣುಮೂರ್ತಿ ಮಹಾಗಣಪತಿ ದೇವಳದ ರಥ ಕೊಠಡಿ, ರಂಗಮಂಟಪಕ್ಕೆ ಶುಕ್ರವಾರ ಸಚಿವ ಶ್ರೀನಿವಾಸ ಪೂಜಾರಿ ಭೂಮಿಪೂಜೆ ನೆರವೇರಿಸಿದರು. ಅಶ್ವಿನಿ ದಿನೇಶ್, ಅಮರ್ ಹಂದೆ, ಯಶೋಧ ಹಂದೆ, ವೆಂಕಟರಮಣ ಸೋಮಯಾಜಿ ಇದ್ದರು.   

ಕೋಟ(ಬ್ರಹ್ಮಾವರ): ಗ್ರಾಮದ ದೇವಸ್ಥಾನಗಳ ಅಭಿವೃದ್ಧಿಯಿಂದ ಗ್ರಾಮಗಳ ಅಭಿವೃದ್ಧಿ ಸಾಧ್ಯ ಎಂದು ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಕೋಟತಟ್ಟು ಹಂದೆ ವಿಷ್ಣುಮೂರ್ತಿ ಮಹಾಗಣಪತಿ ದೇವಳದ ರಥ ಕೊಠಡಿ, ರಂಗಮಂಟಪಕ್ಕೆ ಶುಕ್ರವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಈ ಪುರಾತನ ದೇಗುಲದ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದರು.

ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಅಮರ ಹಂದೆ, ಸದಸ್ಯರಾದ ವೆಂಕಟರಮಣ ಸೋಮಯಾಜಿ, ಯಶೋದಾ ಹಂದೆ, ರಾಮದೇವ ಹಂದೆ, ಅರ್ಚಕ ಪ್ರತಿನಿಧಿ ಸೀತಾರಾಮ ಭಟ್, ಕೃಷ್ಣ ಭಟ್, ಕೋಟತಟ್ಟು ಪಂಚಾಯಿತಿ ಅಧ್ಯಕ್ಷೆ ಅಶ್ವಿನಿ ದಿನೇಶ್, ಉಪಾಧ್ಯಕ್ಷ ವಾಸು ಪೂಜಾರಿ, ಸದಸ್ಯರಾದ ಪ್ರಕಾಶ್ ಹಂದಟ್ಟು, ಜ್ಯೋತಿ, ಸತೀಶ್ ಕುಂದರ್, ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಸದಸ್ಯ ಶ್ಯಾಮಸುಂದರ್ ನಾಯರಿ, ಸಾಲಿಗ್ರಾಮ ಗುರುನರಸಿಂಹ ದೇವಳದ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಕೆ.ಎಸ್ ಕಾರಂತ್, ಯಕ್ಷದೇಗುಲದ ಸುದರ್ಶನ ಉರಾಳ ಇದ್ದರು. ದೇವಳದ ಉತ್ಸವ ಸಮಿತಿಯ ಸುಜಯೀಂದ್ರ ಹಂದೆ ಕಾರ್ಯಕ್ರಮ ನಿರೂಪಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.