ಹೆಬ್ರಿ: ಕಬ್ಬಿನಾಲೆ ಮಲೆಕುಡಿಯ ಸಂಘದ ಸಕ್ರಿಯ ಸದಸ್ಯರಾಗಿ ಸಮಾಜಸೇವೆ ಮಾಡುತ್ತಿರುವ ಗೋಪಾಲ ಗೌಡ, ಹರೀಶ ಗೌಡ ಅವರನ್ನು ಮೇಲ್ಮಠ ಲಕ್ಷ್ಮಿನಾರಾಯಣ ದೇವಸ್ಥಾನದ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಗಣೇಶೋತ್ಸವ ಸಮಿತಿ ಅಧ್ಯಕ್ಷ ಸುಕುಮಾರ ಹೆಬ್ಬಾರ್ ಅಧ್ಯಕ್ಷತೆ ವಹಿಸಿದ್ದರು. ದೇವಸ್ಥಾನದ ಪ್ರಧಾನ ಅರ್ಚಕ ವೇದಮೂರ್ತಿ ರಾಮಚಂದ್ರ ಭಟ್, ಧಾರ್ಮಿಕ ಉಪನ್ಯಾಸ ನೀಡಿದ ಕವಿ, ಬರಹಗಾರ ಶ್ರೀಕರ ಭಾರದ್ವಾಜ್, ಮಲೆಕುಡಿಯ ಸಂಘದ ಅಧ್ಯಕ್ಷ ರಾಜು ಗೌಡ, ಗಣೇಶೋತ್ಸವ ಸಮಿತಿಯ ಪೂರ್ವಾದ್ಯಕ್ಷರಾದ ನಾಗಭೂಷಣ ಹೆಬ್ಬಾರ್, ಜ್ಞಾನೇಶ್ವರ ಹೆಬ್ಬಾರ್, ಶಶಿಧರ ಹೆಬ್ಬಾರ್, ರಾಧಾಕೃಷ್ಣ ಹೆಬ್ಬಾರ್, ಕಾರ್ಯದರ್ಶಿ ಪರಮೇಶ್ವರ ಹೆಬ್ಬಾರ್, ಬಾಲಕೃಷ್ಣ ಹೆಬ್ಬಾರ್ ಪೇರಳ, ಬಾಲಚಂದ್ರ ಹೆಬ್ಬಾರ್ ಇದ್ದರು. ಸಮಿತಿಯ ಕೆ. ರಾಮಚಂದ್ರ ಭಟ್ ವರಂಗ ನಿರೂಪಿಸಿದರು. ಮುಕ್ತಾ ಹೆಬ್ಬಾರ್ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.