ADVERTISEMENT

ಕಾಪು | ಬಸ್‌ ತಂಗುದಾಣದಲ್ಲಿ ವಾಗ್ವಾದ: ಮೂವರು ಪೊಲೀಸ್ ವಶಕ್ಕೆ 

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2025, 5:46 IST
Last Updated 19 ಸೆಪ್ಟೆಂಬರ್ 2025, 5:46 IST
ಕಾಪು ಪೇಟೆಯಲ್ಲಿ ವಾಗ್ವಾದ ನಡೆಸುತ್ತಿರುವ ಚಾಲಕ, ನಿರ್ವಾಹಕ ಹಾಗೂ ಟೈಮ್ ಕೀಪರ್
ಕಾಪು ಪೇಟೆಯಲ್ಲಿ ವಾಗ್ವಾದ ನಡೆಸುತ್ತಿರುವ ಚಾಲಕ, ನಿರ್ವಾಹಕ ಹಾಗೂ ಟೈಮ್ ಕೀಪರ್   

ಕಾಪು (ಪಡುಬಿದ್ರಿ): ಇಲ್ಲಿನ ಬಸ್‌ ತಂಗುದಾಣದಲ್ಲಿ ವಾಗ್ವಾದ ನಡೆಸಿದ ಆರೋಪದಲ್ಲಿ ಬಸ್‌ ಚಾಲಕ, ನಿರ್ವಾಹಕ ಹಾಗೂ ಟೈಮ್ ಕೀಪರ್‌ ವಿರುದ್ಧ ಸಾರ್ವಜನಿಕರ ಶಾಂತಿಗೆ ಭಂಗ ಉಂಟು ಮಾಡಿರುವ ಆರೋಪದ ಮೇಲೆ ಕಾಪು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತಾಲ್ಲೂಕು ಪಡು ಗ್ರಾಮದ ಕಾಪು ಪೇಟೆಯಲ್ಲಿರುವ ಕಾಪು-ಉಡುಪಿ ಬಸ್‌ ನಿಲ್ದಾಣದ ಬಳಿ ಈ ಮೂವರು ಜಗಳವಾಡಿರುವ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿಯಲಾಗಿತ್ತು. ಈ ವಿಡಿಯೊ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಬಸ್‌ನ ಚಾಲಕ ನಿಜಾಮುದ್ದೀನ್, ನಿರ್ವಾಹಕ ಶೇಖ್ ಅಹಮ್ಮದ್ ಹಾಗೂ ಟೈಮ್ ಕೀಪರ್‌ ಚೇತನ್ ಎಂಬವರನ್ನು ವಶಕ್ಕೆ ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT