ಉಡುಪಿ: ಯಶ್ ಅಭಿನಯದ ಬಹು ನಿರೀಕ್ಷಿತ ಕೆಜಿಎಫ್ ಚಿತ್ರಕ್ಕೆ ಉಡುಪಿಯಲ್ಲಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.
ಶುಕ್ರವಾರ ಮೊದಲ ಶೋ ನೋಡಲು ನೂರಾರು ಯಶ್ ಅಭಿಮಾನಿಗಳು ಬೆಳಿಗ್ಗಿನಿಂದಲೇ ಅಲಂಕಾರ್ ಚಿತ್ರದ ಬಳಿ ಜಮಾಯಿಸಿದ್ದರು. ಈ ಕೆಲವೇ ನಿಮಿಷಗಳಲ್ಲಿ ಬಿಸಿ ದೋಸೆಯಂತೆ ಟಿಕೆಟ್ಗಳು ಮಾರಾಟವಾದವು. ಚಿತ್ರಮಂದಿರ ಹೌಸ್ಫುಲ್ ಆಯಿತು.
ಟಿಕೆಟ್ ಸಿಗದೆ ನಿರಾಶರಾದ ಯಶ್ ಅಭಿಮಾನಿಗಳು ಚಿತ್ರಮಂದಿರ ಬಳಿ ಟಿಕೆಟ್ಗಾಗಿ ಘೋಷಣೆ ಕೂಗಿದರು. ಶೋಗಳನ್ನು ಹೆಚ್ಚಿಸುವಂತೆ ಮಾಲೀಕರನ್ನು ಒತ್ತಾಯಿಸಿದರು. ಈ ಸಂದರ್ಭ ಪೊಲೀಸರು ಮಧ್ಯೆ ಪ್ರವೇಶಿಸಿ ಯಶ್ ಅಭಿಮಾನಿಗಳನ್ನು ಚದುರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.