ADVERTISEMENT

ಗುರು ಕಾಣಿಕೆ ಸಮರ್ಪಣೆ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2025, 6:22 IST
Last Updated 21 ಡಿಸೆಂಬರ್ 2025, 6:22 IST
ಕುಂದಾಪುರದ ಕೋಟಿಲಿಂಗೇಶ್ವರ ಕಲಾ ಬಳಗದಿಂದ ಕಡ್ಲೆ ಗಣಪತಿ ಹೆಗ್ಡೆ ಅವರಿಗೆ ಗುರು ಕಾಣಿಕೆ ಸಮರ್ಪಿಸಲಾಯಿತು 
ಕುಂದಾಪುರದ ಕೋಟಿಲಿಂಗೇಶ್ವರ ಕಲಾ ಬಳಗದಿಂದ ಕಡ್ಲೆ ಗಣಪತಿ ಹೆಗ್ಡೆ ಅವರಿಗೆ ಗುರು ಕಾಣಿಕೆ ಸಮರ್ಪಿಸಲಾಯಿತು    

ಕುಂದಾಪುರ: ಇತ್ತೀಚೆಗೆ ನಡೆದ ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ಜಾತ್ರೆಯ ಸಂಭ್ರಮದ ಅಂಗವಾಗಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನೆರಂಬಳ್ಳಿ ರಾಘವೇಂದ್ರ ರಾವ್ ಅವರ ಪ್ರಾಯೋಜಕತ್ವದಲ್ಲಿನಡೆದ ಮಕ್ಕಳ ಯಕ್ಷಗಾನದ ಗುರು ಕಾಣಿಕೆಯನ್ನು ಕಡ್ಲೆ ಗಣಪತಿ ಹೆಗ್ಡೆ ಅವರಿಗೆ ನೀಡಲಾಯಿತು.

ಕಲಾ ಬಳಗದ ಅಧ್ಯಕ್ಷ ನ್ಯಾಯವಾದಿ ಹಂದಕುಂದ ಅಶೋಕ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸ್ಥಾಪಕ ಅಧ್ಯಕ್ಷ ರಾಜೇಶ್ ಕುಮಾರ್ ಶೆಟ್ಟಿ, ಉಪಾಧ್ಯಕ್ಷ ನಾರಾಯಣ ಭಂಡಾರಿ ಹಾಗೂ ಇಂದ್ರಾಕ್ಷಿ ಉಡುಪ ಪಾಲ್ಗೊಂಡಿದ್ದರು. ಕಲಾ ಬಳಗದ ಸದಸ್ಯ ಚಂದ್ರ ಮರಕಾಲ ಯಕ್ಷಗಾನದ ಖರ್ಚು ವೆಚ್ಚಗಳ ಮಾಹಿತಿ ನೀಡಿದರು. ಕಾರ್ಯದರ್ಶಿ ಬಾಬು ಆಚಾರ್ ವಂದಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT