ADVERTISEMENT

ಕೃಷ್ಣಮಠದಲ್ಲಿ ಲಕ್ಷ ದೀಪೋತ್ಸವ ಸಂಭ್ರಮ

ರಥಬೀದಿಗೆ ಗೂಡುದೀಪಗಳ ತೋರಣ, ತೆಪ್ಪೋತ್ಸವ, ತುಳಸಿ ಪೂಜೆ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2021, 16:10 IST
Last Updated 16 ನವೆಂಬರ್ 2021, 16:10 IST
ಕೃಷ್ಣಮಠದ ರಥಬೀದಿಯಲ್ಲಿ ಮಂಗಳವಾರ ರಥೋತ್ಸವ ನಡೆಯಿತು.
ಕೃಷ್ಣಮಠದ ರಥಬೀದಿಯಲ್ಲಿ ಮಂಗಳವಾರ ರಥೋತ್ಸವ ನಡೆಯಿತು.   

ಉಡುಪಿ: ಕೃಷ್ಣ ಮಠದಲ್ಲಿ ಉತ್ಥಾನ ದ್ವಾದಶಿ ದಿನವಾದ ಮಂಗಳವಾರ ಲಕ್ಷ ದೀಪೋತ್ಸವಕ್ಕೆ ಚಾಲನೆ ದೊರೆಯಿತು. ನ.19ರವರೆಗೆ 5 ದಿನಗಳ ಕಾಲ ನಿತ್ಯ ಲಕ್ಷ ದೀಪೋತ್ಸವ, ತೆಪ್ಪೋತ್ಸವ, ರಥೋತ್ಸವ ನಡೆಯಲಿದೆ.

ಸತತ 148 ದಿನಗಳ ಬಳಿಕ ಗರ್ಭಗುಡಿಯಿಂದ ಉತ್ಸವ ಮೂರ್ತಿಯನ್ನು ಸ್ವರ್ಣ ಪಲ್ಲಕ್ಕಿಯಲ್ಲಿಟ್ಟು ಮಧ್ವ ಸರೋವರದಲ್ಲಿ ತೆಪ್ಪೋತ್ಸವ ನಡೆಸಿ, ಬಳಿಕ ಉತ್ಸವ ಮೂರ್ತಿಯನ್ನು ರಥದಲ್ಲಿರಿಸಿ ರಥಬೀದಿಯ ಸುತ್ತಲೂ ರಥೋತ್ಸವ ನೆರವೇರಿಸಲಾಯಿತು. ಅನಂತೇಶ್ವರ, ಚಂದ್ರ ಮೌಳೀಶ್ವರ ದೇವರಿಗೂ ರಥೋತ್ಸವ ನಡೆಯಿತು.

ರಥಬೀದಿಯ ಸುತ್ತಲೂ ಕಟ್ಟಿಗೆಯ ಸ್ಟಾಂಡ್‌ನಲ್ಲಿ ಲಕ್ಷ ಹಣತೆಗಳನ್ನು ಹಚ್ಚಿ ಲಕ್ಷ ದೀಪೋತ್ಸವ ನೆರವೇರಿಸಲಾಯಿತು. ಗೂಡುದೀಪಗಳ ತೋರಣ ರಥಬೀದಿಯ ಅಂದವನ್ನು ಇಮ್ಮಡಿಗೊಳಿಸಿತ್ತು. ಬೆಳಿಗ್ಗೆ ತುಳಸಿ ಪೂಜೆ, ಮಧ್ವ ಸರೋವರದಲ್ಲಿ ಪಟ್ಟದ ದೇವರುಗಳಿಗೆ ಕ್ಷೀರಾಬ್ದಿ ನಡೆಯಿತು.

ADVERTISEMENT

ಪರ್ಯಾಯ ಅದಮಾರು ಮಠಾಧೀಶರಾದ ವಿಶ್ವಪ್ರಿಯತೀರ್ಥ ಸ್ವಾಮೀಜಿ, ಈಶಪ್ರಿಯತೀರ್ಥ ಸ್ವಾಮೀಜಿ, ಕೃಷ್ಣಾಪುರ ಮಠಾಧೀಶರಾದ ವಿದ್ಯಾಸಾಗರ ತೀರ್ಥ ಸ್ವಾಮೀಜಿ, ಪಲಿಮಾರು ಮಠಾಧೀಶರಾದ ವಿದ್ಯಾಧೀಶ ತೀರ್ಥ ಸ್ವಾಮೀಜಿ, ಪೇಜಾವರ ಮಠಾಧೀಶರಾದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಕಾಣಿಯೂರು ಮಠಾಧೀಶರಾದ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ, ಪಲಿಮಾರು ಕಿರಿಯ ಮಠಾಧೀಶರಾದ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.