ADVERTISEMENT

ಮಾನವೀಯತೆಯಲ್ಲಿ ನೀಡಿದ ಚಿನ್ನ ವಾಪಸ್‌ ಕೇಳಿದಕ್ಕೆ ಜೀವ ಬೆದರಿಕೆ: ಪ್ರಕರಣ ದಾಖಲು

ಪಡುಬಿದ್ರಿ | ಮಾನವೀಯತೆಯಲ್ಲಿ ನೀಡಿದ ಚಿನ್ನ: ಬ್ಯಾಂಕ್‌ನಲ್ಲಿ ಅಡವು

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2024, 3:32 IST
Last Updated 5 ಸೆಪ್ಟೆಂಬರ್ 2024, 3:32 IST
<div class="paragraphs"><p>ಚಿನ್ನ,</p></div>

ಚಿನ್ನ,

   

(ಸಾಂದರ್ಭಿಕ ಚಿತ್ರ)

ಪಡುಬಿದ್ರಿ: ಮಾನವೀಯ ನೆಲೆಯಲ್ಲಿ ಚಿನ್ನವನ್ನು ನೀಡಿ ವಾಪಾಸು ಕೇಳಿದಾಗ ಜೀವ ಬೆದರಿಕೆ ಒಡ್ಡಿರುವ ಬಗ್ಗೆ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ಮುಲ್ಕಿಯಲ್ಲಿ ಬ್ಯೂಟಿಪಾರ್ಲರ್ ನಡೆಸುತ್ತಿದ್ದ ಮಮತಾ ಮೋಸ ಹೋದ ಮಹಿಳೆ.

ಸೌಮ್ಯಾ ಎಂಬಾಕೆ ಪರಿಚಯ ಮಾಡಿಕೊಂಡು ತಾನು ಕಷ್ಟದಲ್ಲಿ ಇದ್ದೇನೆ ಎಂದು ಪದೇ ಪದೇ ಕೇಳಿದಾಗ, ಮಾನವೀಯತೆ ದೃಷ್ಟಿಯಿಂದ ಆಕೆಯನ್ನು ನಂಬಿ, ತನ್ನಲ್ಲಿದ್ದ ₹1.5ಲಕ್ಷ, 80 ಗ್ರಾಂ ತೂಕದ ಚಿನ್ನದ ನಕ್ಲೆಸ್, 2 ಉಂಗುರ, ಒಂದು ಸರ ಎರಡು ಪೆಂಡೆಂಟ್, ಮೂರು ಜೊತೆ ಕಿವಿಯೋಲೆಯನ್ನು ನೀಡಿರುವುದಾಗಿ ಮಮತಾ ಅವರು ದೂರಿನಲ್ಲಿ ತಿಳಿಸಿದ್ದಾರೆ.

ಆದರೆ ಹಣ ಮತ್ತು ಚಿನ್ನವನ್ನು ವಾಪಾಸು ನೀಡುವಂತೆ ಪದೇ ಪದೇ ಕೇಳಿದಾಗ ಚಿನ್ನಾಭರಣವನ್ನು ಉಡುಪಿಯ ಸರ್ವೀಸ್ ಬಸ್ ನಿಲ್ದಾಣದ ಬಳಿ ಇರುವ ಸುಧೀಂದ್ರ ಪೈನಾನ್ಸ್ ಕಾರ್ಪೋರೇಶನ್‌ನಲ್ಲಿ ಅಡವಿಟ್ಟು  ₹3,51,900 ಸಾಲ ಪಡೆದಿರುವುದಾಗಿ ಸೌಮ್ಯಾ ತಿಳಿಸಿದ್ದಾಳೆ. ಚಿನ್ನಾಭರಣಗಳನ್ನು ಬಿಡಿಸಿ ಕೊಡುವಂತೆ ಕೇಳಿದಾಗ ಜೀವ ಬೆದರಿಕೆ ಒಡ್ಡಿರುವುದಾಗಿ ಪಡುಬಿದ್ರಿ ಠಾಣೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.