ADVERTISEMENT

ಪ್ರಕಾಶ್‌ಗೆ ರಾಷ್ಟ್ರಪತಿ ವಿಶಿಷ್ಟ ಸೇವಾ ಪದಕ

​ಪ್ರಜಾವಾಣಿ ವಾರ್ತೆ
Published 25 ಜನವರಿ 2021, 15:28 IST
Last Updated 25 ಜನವರಿ 2021, 15:28 IST
ಪ್ರಕಾಶ್‌, ಎಎಸ್‌ಐ
ಪ್ರಕಾಶ್‌, ಎಎಸ್‌ಐ   

ಉಡುಪಿ: ರಾಷ್ಟ್ರಪತಿ ವಿಶಿಷ್ಟ ಸೇವಾ ಪದಕ ಪುರಸ್ಕಾರಕ್ಕೆ ಎಸ್‌ಪಿ ಕಚೇರಿಯಲ್ಲಿ ಕ್ರೈಂ ರೆಕಾರ್ಡ್‌ ಬ್ಯುರೊದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಎಸ್‌ಐ ಪ್ರಕಾಶ್‌ ಆಯ್ಕೆಯಾಗಿದ್ದಾರೆ.

1993ರಲ್ಲಿ ಇಲಾಖೆಗೆ ಸೇರಿದ ಪ್ರಕಾಶ್‌ ದಕ್ಷಿಣ ಕನ್ನಡ ಜಿಲ್ಲೆಯ ವೇಣೂರು, ಉಡುಪಿ ಸಂಚಾರ ಠಾಣೆ, ಡಿಸಿಆರ್‌ಬಿ, ಮಣಿಪಾಲ ಠಾಣೆ, ಡಿಎಸ್‌ಬಿ, ಕಾಪು ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. 2017ರಲ್ಲಿ ಹೆಡ್‌ಕಾನ್‌ಸ್ಟೆಬಲ್‌ ಹುದ್ದೆಯಿಂದ ಎಎಸ್‌ಐ ಆಗಿ ಪ್ರಕಾಶ್ ಬಡ್ತಿ ಹೊಂದಿದ್ದರು.

ಈ ಸಾಲಿನಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಿಂದ ರಾಷ್ಟ್ರಪತಿ ವಿಶಿಷ್ಟ ಸೇವಾ ಪದಕ ಪುರಸ್ಕಾರಕ್ಕೆ ಆಯ್ಕೆಯಾಗಿರುವ ಏಕೈಕ ವ್ಯಕ್ತಿ ಪ್ರಕಾಶ್ ಆಗಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.