ADVERTISEMENT

ಕೋಟ: ಕೇಂದ್ರ ಸರ್ಕಾರದ ಮಲತಾಯಿ ಧೋರಣೆ, ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2024, 13:41 IST
Last Updated 21 ಏಪ್ರಿಲ್ 2024, 13:41 IST
ಕೋಟ ಬ್ಲಾಕ್ ಕಾಂಗ್ರೆಸ್ ವತಿಯಿಂದ ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ಖಂಡಿಸಿ ಇಂದಿರಾ ಭವನ ಕಚೇರಿಯಲ್ಲಿ ಚೊಂಬು ಪ್ರತಿಭಟನೆ ಭಾನುವಾರ ನಡೆಯಿತು
ಕೋಟ ಬ್ಲಾಕ್ ಕಾಂಗ್ರೆಸ್ ವತಿಯಿಂದ ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ಖಂಡಿಸಿ ಇಂದಿರಾ ಭವನ ಕಚೇರಿಯಲ್ಲಿ ಚೊಂಬು ಪ್ರತಿಭಟನೆ ಭಾನುವಾರ ನಡೆಯಿತು   

ಕೋಟ(ಬ್ರಹ್ಮಾವರ): ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ಖಂಡಿಸಿ ಕೋಟ ಬ್ಲಾಕ್ ಕಾಂಗ್ರೆಸ್ ವತಿಯಿಂದ ಇಂದಿರಾ ಭವನ ಕಚೇರಿಯಲ್ಲಿ ‘ಚೊಂಬು’ ಪ್ರತಿಭಟನೆ ಭಾನುವಾರ ನಡೆಯಿತು.

ನೆರೆ, ಬರ ಪರಿಹಾರ, ತೆರಿಗೆ ಹಣ ಮರಳಿಸದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ವಿರುದ್ಧ ಕಾಂಗ್ರೆಸ್ ಆರಂಭಿಸಿರುವ ‘ಚೊಂಬು’ ಚಳುವಳಿಯನ್ನು ಕೋಟ ಬ್ಲಾಕ್ ಕಾಂಗ್ರೆಸ್‌ನಲ್ಲಿಯೂ ನಡೆಸಿ, ಕೇಂದ್ರದಿಂದ ರಾಜ್ಯಕ್ಕೆ ದೊರಕಿರುವುದು ಕೇವಲ ಚೊಂಬು ಮಾತ್ರ ಎಂದು ಆಕ್ರೋಶ ವ್ಯಕ್ತಪಡಿಸಲಾಯಿತು.

ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ ಎ ಕುಂದರ್, ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಸದ್ಯಸ ರವೀಂದ್ರ ಕಾಮತ್ ಗುಂಡ್ಮಿ, ಹಿಂದುಳಿದ ಘಟಕದ ಅಧ್ಯಕ್ಷ ದಿನೇಶ ಬಂಗೇರ ಗುಂಡ್ಮಿ, ಕಾಂಗ್ರೆಸ್ ಮುಖಂಡರಾದ ಗೋಪಾಲ ಬಂಗೇರ, ಉಮೇಶ ಮರಕಾಲ, ಸಂತೋಷ ಹೇರಾಡಿ, ಕರುಣಾಕರ ಪೂಜಾರಿ ಯಡ್ತಾಡಿ, ನರಸಿಂಹ ಮರಕಾಲ ಕೋಟತಟ್ಟು, ವಸಂತಿ ಹೊಸಾಳ, ಜಯಕ್ಕ ಹೊಸಾಳ, ಸುರೇಶ ಪೂಜಾರಿ ಯಡ್ತಾಡಿ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.