ಉಡುಪಿ: ಜಿಲ್ಲೆಯಲ್ಲಿ ಶನಿವಾರವೂ ಬಿರುಗಾಳಿ ಸಹಿತ ಮಳೆ ಸುರಿಯಿತು. ಬ್ರಹ್ಮಾವರ ತಾಲ್ಲೂಕಿನ ಕರ್ಕಡ, ಹಾವಂಜೆ, ಇನ್ನಾ, ಬೈಂದೂರು ತಾಲ್ಲೂಕಿನ ನಾವುಂದ, ಕಾಲ್ತೋಡು, ಬಿಜೂರು, ಉಡುಪಿ ತಾಲ್ಲೂಕಿನ ತೆಂಕನಿಡಿಯೂರು ಗ್ರಾಮಗಳಲ್ಲಿ ಮನೆಗಳಿಗೆ ಹಾನಿಯಾಗಿದೆ.
ನಿರಂತರ ಸುರಿಯುತ್ತಿರುವ ಮಳೆಗೆ ಉಡುಪಿಯ ಮಠದಬೆಟ್ಟು ಕಾಲು ಸೇತುವೆ ಕುಸಿದೆ. ಪರ್ಕಳದಲ್ಲಿ ಬಿರುಗಾಳಿಗೆ ಹಲವು ಮನೆಗಳ ಹೆಂಚು, ತಗಡಿನ ಶೀಟ್ಗಳು ಹಾರಿಹೋಗಿವೆ. ಜಿಲ್ಲೆಯಲ್ಲಿ 3 ಸೆಂ.ಮೀ ಮಳೆ ಬಿದ್ದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.