ADVERTISEMENT

ಸಮನ್ವಿ ಸಾವಿಗೆ ಹೃದಯಾಘಾತ ಕಾರಣ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2022, 7:13 IST
Last Updated 7 ಆಗಸ್ಟ್ 2022, 7:13 IST

ಬೈಂದೂರು: ಕಳೆದ ತಿಂಗಳು ನಡೆದ ಬಾಲಕಿ ಸಮನ್ವಿಯ ಸಾವಿಗೆ ನಿಖರ ಕಾರಣ ಈಗ ತಿಳಿದು ಬಂದಿದ್ದು, ಆಕೆ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ಮರಣೋತ್ತರ ಪರೀಕ್ಷಾ ವರದಿಯಿಂದ ತಿಳಿದುಬಂದಿದೆ.

ಜುಲೈ 20 ರಂದು ಬೆಳಿಗ್ಗೆ ಉಪ್ಪುಂದದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಎರಡನೇ ತರಗತಿಯ ವಿದ್ಯಾರ್ಥಿನಿ ಸಮನ್ವಿ, ತನ್ನ ತಾಯಿಯೊಂದಿಗೆ ಬಸ್ ಏರಲು ಬರುತ್ತಿದ್ದಾಗ ಬಸ್ ಬಳಿಯೇ ಕುಸಿದು ಬಿದ್ದಿದ್ದಳು. ಕೂಡಲೇ ಆಸ್ಪತ್ರೆಗೆ ಕರೆದ್ಯೊಯಲಾಗಿತ್ತು. ಆದರೆ ಆಕೆ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದರು.

ಬಾಲಕಿಯ ಗಂಟಲಿನಲ್ಲಿ ಕವರ್ ಸಹಿತ ಚಾಕಲೇಟ್ ಸಿಲುಕಿಕೊಂಡಿದ್ದರಿಂದ ಉಸಿರು ಕಟ್ಟಿ ಸಾವಿಗೀಡಾಗಿರಬಹುದೆಂದು ಶಂಕಿಸಲಾಗಿತ್ತು. ಆದರೆ ಮರಣೋತ್ತರ ಪರೀಕ್ಷಾ ವರದಿಯ ಪ್ರಕಾರ ಆಕೆ ಹೃದಯಾಘಾತದಿಂದ ಮೃತಪಟ್ಟಿರುವುದುದೃಢಪಟ್ಟಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.