ADVERTISEMENT

ತ್ರಿವಳಿ ತಲಾಕ್: ಪತಿ ವಿರುದ್ಧ ಪತ್ನಿ ದೂರು

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2019, 14:33 IST
Last Updated 9 ಸೆಪ್ಟೆಂಬರ್ 2019, 14:33 IST

ಉಡುಪಿ: ಪತಿ ತ್ರಿವಳಿ ತಲಾಕ್ ನೀಡಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಕುಂದಾಪುರದ ಆಲ್ಫಿಯಾ ಅಕ್ತರ್ ಎಂಬುವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಜುಲೈ 7ರಂದು ಹನೀಫ್‌ ಜತೆ ಕುಂದಾಪುರದ ಮೂಡುಗೋಪಾಡಿಯ ಮಸೀದಿಯಲ್ಲಿ ಮದುವೆ ನಡೆದಿತ್ತು. ಮದುವೆಗೂ ಮುನ್ನ ₹5 ಲಕ್ಷ ವರದಕ್ಷಿಣೆಗೆ ಪತಿಯ ಮನೆಯವರು ಬೇಡಿಕೆ ಇಟ್ಟಿದ್ದರು. ₹2 ಲಕ್ಷ ಹೊಂದಿಸಿ ಕೊಡಲಾಗಿತ್ತು. ಮದುವೆಯಾದ ಬಳಿಕ ವರದಕ್ಷಿಣಿ ಕಡಿಮೆಯಾಯಿತು ಎಂದು ಪತಿ ಹಾಗೂ ಆತನ ಸಂಬಂಧಿಗಳು ಕಿರುಕುಳ ನೀಡುತ್ತಿದ್ದರು.

ಆ.15ರಂದು ಪತಿ ಮೂರು ಬಾರಿ ತಲಾಕ್ ಹೇಳಿ, ಜೀವ ಬೆದರಿಕೆ ಹಾಕಿ ತವರು ಮನೆಗೆ ಕಳಿಸಿದ್ದಾರೆ ಎಂದು ಆಲ್ಫಿಯಾ ಅಕ್ತರ್‌ ದೂರಿನಲ್ಲಿ ತಿಳಿಸಿದ್ದಾರೆ.

ADVERTISEMENT

2019ರ ಮುಸ್ಲಿಂ ಮಹಿಳೆಯರ ವೈವಾಹಿಕ ಹಕ್ಕುಗಳ ರಕ್ಷಣೆ ಕಾಯ್ದೆಯಡಿ ಪತಿ ಹನೀಫ್‌ ಹಾಗೂ ಸಂಬಂಧಿಗಳಾದ ಸೈಯದ್ ಅಬ್ಬಾಸ್‌, ಜೈತುನ್‌, ಆಯಿಷಾ ವಿರುದ್ಧ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.