ADVERTISEMENT

ಇಸ್ಪೀಟ್ ಅಡ್ಡೆಯ ಮೇಲೆ ದಾಳಿ: 6 ಮಂದಿ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2017, 7:25 IST
Last Updated 16 ಅಕ್ಟೋಬರ್ 2017, 7:25 IST

ಕಾರವಾರ: ಅಂಕೋಲಾ ತಾಲ್ಲೂಕಿನ ಅಂದ್ಲೆ ಸೀ ಫುಡ್‌ ಫ್ಯಾಕ್ಟರಿ ಬಳಿಯ ಮಾವಿನ ತೋಟದಲ್ಲಿ ನಡೆಯುತ್ತಿದ್ದ ಇಸ್ಪೀಟ್ ಅಡ್ಡೆಯ ಮೇಲೆ ಶನಿವಾರ ಪೊಲೀಸರು ದಾಳಿ ನಡೆಸಿದ್ದು, 6 ಮಂದಿಯನ್ನು ಬಂಧಿಸಿ ₹ 23,660 ನಗದು, 3 ಕಾರು, 7 ಬೈಕ್, ಒಂದು ಆಟೋವನ್ನು ವಶ ಪಡಿಸಿಕೊಂಡಿದ್ದಾರೆ.

ಅಡ್ಡೆಯಲ್ಲಿ ಇದ್ದ ಸುಮಾರು 15ಕ್ಕೂ ಅಧಿಕ ಮಂದಿಯಲ್ಲಿ ವಿನಾಯಕ ನಾಯ್ಕ, ಮಾನೇಶ್ವರ ಪಟಗಾರ, ಗಿರಿಧರ ಬಂಟ, ಇಕ್ಬಾಲ್ ಶೇಖ್, ಸುರೇಶ ಕಡ್ಲೆಗುಂದಿ, ರಾಜೇಶ ಗೌಡ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಉಳಿದವರು ಪರಾರಿಯಾಗಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ ವಿ.ಪಾಟೀಲ್ ನೇತೃತ್ವದಲ್ಲಿ ಡಿಸಿಐಬಿ ಪೊಲೀಸ್ ಇನ್‌ಸ್ಪೆಕ್ಟರ್ ರಂಗನಾಥ, ಡಿಸಿಬಿ ಇನ್‌ಸ್ಪೆಕ್ಟರ್ ಶರಣಗೌಡ ಪಾಟೀಲ್ ಹಾಗೂ ಸಿಬ್ಬಂದಿ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದರು ಎಂದು ಅಂಕೋಲಾ ವೃತ್ತ ನಿರೀಕ್ಷಕ ಬಸಪ್ಪ ಬುರ್ಲಿ ಮಾಹಿತಿ ನೀಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.